<p><strong>ರಾಂಚಿ: </strong>ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣದ ದರ ಭರಿಸುವ ಮೂಲಕ ನೊಯಿಡಾದ 12 ವರ್ಷದ ಬಾಲಕಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.</p>.<p>8ನೇ ತರಗತಿ ಓದುತ್ತಿರುವ ನಿಹಾರಿಕಾ ದ್ವಿವೇದಿ ತನ್ನ ಉಳಿತಾಯದಿಂದ ಜಾರ್ಖಂಡ್ನ ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣಕ್ಕೆ ₹48 ಸಾವಿರ ನೀಡಿ ಉದಾರತೆ ಮೆರೆದಿದ್ದಾಳೆ. ಈ ಮೂವರು ಕಾರ್ಮಿಕರಲ್ಲಿ ಒಬ್ಬರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ.</p>.<p>ಅನ್ಯರ ಕಷ್ಟಕ್ಕೆ ಸ್ಪಂದಿಸಿದ ಬಾಲಕಿಯ ನಡೆಯನ್ನು ಹೇಮಂತ್ ಸೊರೆನ್ ಸೋಮವಾರ ಶ್ಲಾಘಿಸಿದ್ದಾರೆ. ‘ನಾನು ಆ ಬಾಲಕಿಗೆ ಆಭಾರಿಯಾಗಿದ್ದೇನೆ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಆಕೆಯಲ್ಲಿರುವುದು ಶ್ಲಾಘನೀಯ. ಆಕೆಯ ಭವಿಷ್ಯ ಉಜ್ವಲವಾಗಲಿ’ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/explainer/india-nepal-border-dispute-kalapani-lipulekh-pass-limpiyadhura-732519.html" itemprop="url" target="_blank">ಭಾರತ–ನೇಪಾಳ ಗಡಿ ಸಂಘರ್ಷ: ಏನಿದು ವಿವಾದ, ಮತ್ತೆ ಮುನ್ನೆಲೆಗೆ ಬಂದದ್ದೇಕೆ?</a></p>.<p>‘ಸಮಾಜ ನಮಗೆ ಸಾಕಷ್ಟು ನೀಡಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಸಮಾಜ ನಮಗೆ ನೀಡಿದ್ದನ್ನು ನಾವು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ನಿಹಾರಿಕ ಅಭಿಪ್ರಾಯಪಟ್ಟಿದ್ದಾಳೆ.</p>.<p>ತಮ್ಮ ಊರುಗಳನ್ನು ಸೇರಲು ಸಾವಿರಾರು ಕಿಲೋ ಮೀಟರ್ಗಟ್ಟಲೆ ನಡೆದೇ ಹೋಗುತ್ತಿರುವ ವಲಸೆ ಕಾರ್ಮಿಕರ ವಿಚಾರ ತಿಳಿದ ನಿಹಾರಿಕಾ ಅಂತಹವರಿಗೆ ನೆರವಾಗಬೇಕೆಂದು ನಿರ್ಧರಿಸಿದ್ದಾಳೆ. ಬಳಿಕ ಯಾರಾದರೂ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ಕಷ್ಟ ಅನುಭವಿಸುತ್ತಿದ್ದಾರೆಯೇ ಎಂಬುದನ್ನು ಸ್ನೇಹಿತರಲ್ಲಿ ವಿಚಾರಿಸಿದ್ದಾಳೆ. ಆಗ ಈ ಮೂವರು ಜಾರ್ಖಂಡ್ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ದೊರೆತಿದೆ. ಬಳಿಕ ಆಕೆ ಅವರ ಕಷ್ಟಕ್ಕೆ ಸ್ಪಂದಿಸಿದ್ದಾಳೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ: </strong>ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣದ ದರ ಭರಿಸುವ ಮೂಲಕ ನೊಯಿಡಾದ 12 ವರ್ಷದ ಬಾಲಕಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.</p>.<p>8ನೇ ತರಗತಿ ಓದುತ್ತಿರುವ ನಿಹಾರಿಕಾ ದ್ವಿವೇದಿ ತನ್ನ ಉಳಿತಾಯದಿಂದ ಜಾರ್ಖಂಡ್ನ ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣಕ್ಕೆ ₹48 ಸಾವಿರ ನೀಡಿ ಉದಾರತೆ ಮೆರೆದಿದ್ದಾಳೆ. ಈ ಮೂವರು ಕಾರ್ಮಿಕರಲ್ಲಿ ಒಬ್ಬರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ.</p>.<p>ಅನ್ಯರ ಕಷ್ಟಕ್ಕೆ ಸ್ಪಂದಿಸಿದ ಬಾಲಕಿಯ ನಡೆಯನ್ನು ಹೇಮಂತ್ ಸೊರೆನ್ ಸೋಮವಾರ ಶ್ಲಾಘಿಸಿದ್ದಾರೆ. ‘ನಾನು ಆ ಬಾಲಕಿಗೆ ಆಭಾರಿಯಾಗಿದ್ದೇನೆ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮತೆ ಆಕೆಯಲ್ಲಿರುವುದು ಶ್ಲಾಘನೀಯ. ಆಕೆಯ ಭವಿಷ್ಯ ಉಜ್ವಲವಾಗಲಿ’ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/explainer/india-nepal-border-dispute-kalapani-lipulekh-pass-limpiyadhura-732519.html" itemprop="url" target="_blank">ಭಾರತ–ನೇಪಾಳ ಗಡಿ ಸಂಘರ್ಷ: ಏನಿದು ವಿವಾದ, ಮತ್ತೆ ಮುನ್ನೆಲೆಗೆ ಬಂದದ್ದೇಕೆ?</a></p>.<p>‘ಸಮಾಜ ನಮಗೆ ಸಾಕಷ್ಟು ನೀಡಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಸಮಾಜ ನಮಗೆ ನೀಡಿದ್ದನ್ನು ನಾವು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ನಿಹಾರಿಕ ಅಭಿಪ್ರಾಯಪಟ್ಟಿದ್ದಾಳೆ.</p>.<p>ತಮ್ಮ ಊರುಗಳನ್ನು ಸೇರಲು ಸಾವಿರಾರು ಕಿಲೋ ಮೀಟರ್ಗಟ್ಟಲೆ ನಡೆದೇ ಹೋಗುತ್ತಿರುವ ವಲಸೆ ಕಾರ್ಮಿಕರ ವಿಚಾರ ತಿಳಿದ ನಿಹಾರಿಕಾ ಅಂತಹವರಿಗೆ ನೆರವಾಗಬೇಕೆಂದು ನಿರ್ಧರಿಸಿದ್ದಾಳೆ. ಬಳಿಕ ಯಾರಾದರೂ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ಕಷ್ಟ ಅನುಭವಿಸುತ್ತಿದ್ದಾರೆಯೇ ಎಂಬುದನ್ನು ಸ್ನೇಹಿತರಲ್ಲಿ ವಿಚಾರಿಸಿದ್ದಾಳೆ. ಆಗ ಈ ಮೂವರು ಜಾರ್ಖಂಡ್ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ದೊರೆತಿದೆ. ಬಳಿಕ ಆಕೆ ಅವರ ಕಷ್ಟಕ್ಕೆ ಸ್ಪಂದಿಸಿದ್ದಾಳೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>