<p><strong>ಭೋಪಾಲ: </strong>ಮಧ್ಯಪ್ರದೇಶ ರಾಜಕೀಯವು ಮಹತ್ವದ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ನೇತಾರ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಿಗೇ, 18 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದ ಅವರನ್ನು ಕಾಂಗ್ರೆಸ್ ಉಚ್ಚಾಟಿಸಿದೆ.</p>.<p><span style="color:#c0392b;"><strong>ಇದನ್ನೂ ಓದಿ:</strong></span><a href="https://www.prajavani.net/stories/national/congress-leader-jyotiraditya-scindia-tenders-resignation-to-congress-president-sonia-gandhi-711219.html" itemprop="url">ಕಾಂಗ್ರೆಸ್ನಿಂದ ಜ್ಯೋತಿರಾದಿತ್ಯ ಸಿಂಧಿಯಾ ಉಚ್ಚಾಟನೆ: ಬಿಜೆಪಿ ರಾಜ್ಯಸಭೆ ಟಿಕೆಟ್ </a></p>.<p><strong>ರಾಜೀನಾಮೆ ಪತ್ರದಲ್ಲಿ ಏನಿದೆ?</strong></p>.<p>ಸಿಂಧಿಯಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದ ಸಾರಾಂಶ ಇಲ್ಲಿದೆ:</p>.<p>"ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆಲಸ ಮಾಡಿದ್ದು, ಈಗ ಮುಂದೆ ಸಾಗಲು ನನಗಿದು ಸಕಾಲ. ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಮತ್ತು ನಿಮಗೆ ಚೆನ್ನಾಗಿ ತಿಳಿದಿರುವಂತೆ, ಕಳೆದ ಒಂದು ವರ್ಷದಿಂದಲೇ ಈ ಪ್ರಕ್ರಿಯೆಯು ನಿಧಾನವಾಗಿಯೇ ಸಾಗುತ್ತಿತ್ತು.</p>.<p>ಆರಂಭದಿಂದಲೇ ನನ್ನ ಗುರಿ ಮತ್ತು ಉದ್ದೇಶ ಒಂದೇ. ನನ್ನ ರಾಜ್ಯದ ಮತ್ತು ದೇಶದ ಜನರ ಸೇವೆ ಮಾಡುವುದು. ಈ ಪಕ್ಷದಲ್ಲಿದ್ದುಕೊಂಡು ಇದನ್ನು ಮಾಡುವುದು ಸಾಧ್ಯವೇ ಇಲ್ಲ ಎಂಬುದು ನನಗೆ ಮನದಟ್ಟಾಗಿದೆ.ನನ್ನ ಜನ ಮತ್ತು ನನ್ನ ಕಾರ್ಯಕರ್ತರ ಆಶೋತ್ತರಗಳನ್ನು ಪ್ರತಿಬಿಂಬಿಸಲು ಮತ್ತು ಈಡೇರಿಸಲು, ನಾನು ಹೊಸ ಪಥದಲ್ಲಿ ಸಾಗುವುದೇ ಸೂಕ್ತ ಎಂದು ನನ್ನ ಭಾವನೆ.</p>.<p>ದೇಶ ಸೇವೆ ಮಾಡಲು ನನಗೆ ವೇದಿಕೆಯನ್ನು ಒದಗಿಸಿದ ನಿಮಗೆ ಮತ್ತು ನಿಮ್ಮ ಮೂಲಕ ಪಕ್ಷದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.<br />ಧನ್ಯವಾದಗಳೊಂದಿಗೆ,<br />ಜ್ಯೋತಿರಾದಿತ್ಯ ಸಿಂಧಿಯಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ: </strong>ಮಧ್ಯಪ್ರದೇಶ ರಾಜಕೀಯವು ಮಹತ್ವದ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ನೇತಾರ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಿಗೇ, 18 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದ ಅವರನ್ನು ಕಾಂಗ್ರೆಸ್ ಉಚ್ಚಾಟಿಸಿದೆ.</p>.<p><span style="color:#c0392b;"><strong>ಇದನ್ನೂ ಓದಿ:</strong></span><a href="https://www.prajavani.net/stories/national/congress-leader-jyotiraditya-scindia-tenders-resignation-to-congress-president-sonia-gandhi-711219.html" itemprop="url">ಕಾಂಗ್ರೆಸ್ನಿಂದ ಜ್ಯೋತಿರಾದಿತ್ಯ ಸಿಂಧಿಯಾ ಉಚ್ಚಾಟನೆ: ಬಿಜೆಪಿ ರಾಜ್ಯಸಭೆ ಟಿಕೆಟ್ </a></p>.<p><strong>ರಾಜೀನಾಮೆ ಪತ್ರದಲ್ಲಿ ಏನಿದೆ?</strong></p>.<p>ಸಿಂಧಿಯಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದ ಸಾರಾಂಶ ಇಲ್ಲಿದೆ:</p>.<p>"ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆಲಸ ಮಾಡಿದ್ದು, ಈಗ ಮುಂದೆ ಸಾಗಲು ನನಗಿದು ಸಕಾಲ. ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಮತ್ತು ನಿಮಗೆ ಚೆನ್ನಾಗಿ ತಿಳಿದಿರುವಂತೆ, ಕಳೆದ ಒಂದು ವರ್ಷದಿಂದಲೇ ಈ ಪ್ರಕ್ರಿಯೆಯು ನಿಧಾನವಾಗಿಯೇ ಸಾಗುತ್ತಿತ್ತು.</p>.<p>ಆರಂಭದಿಂದಲೇ ನನ್ನ ಗುರಿ ಮತ್ತು ಉದ್ದೇಶ ಒಂದೇ. ನನ್ನ ರಾಜ್ಯದ ಮತ್ತು ದೇಶದ ಜನರ ಸೇವೆ ಮಾಡುವುದು. ಈ ಪಕ್ಷದಲ್ಲಿದ್ದುಕೊಂಡು ಇದನ್ನು ಮಾಡುವುದು ಸಾಧ್ಯವೇ ಇಲ್ಲ ಎಂಬುದು ನನಗೆ ಮನದಟ್ಟಾಗಿದೆ.ನನ್ನ ಜನ ಮತ್ತು ನನ್ನ ಕಾರ್ಯಕರ್ತರ ಆಶೋತ್ತರಗಳನ್ನು ಪ್ರತಿಬಿಂಬಿಸಲು ಮತ್ತು ಈಡೇರಿಸಲು, ನಾನು ಹೊಸ ಪಥದಲ್ಲಿ ಸಾಗುವುದೇ ಸೂಕ್ತ ಎಂದು ನನ್ನ ಭಾವನೆ.</p>.<p>ದೇಶ ಸೇವೆ ಮಾಡಲು ನನಗೆ ವೇದಿಕೆಯನ್ನು ಒದಗಿಸಿದ ನಿಮಗೆ ಮತ್ತು ನಿಮ್ಮ ಮೂಲಕ ಪಕ್ಷದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.<br />ಧನ್ಯವಾದಗಳೊಂದಿಗೆ,<br />ಜ್ಯೋತಿರಾದಿತ್ಯ ಸಿಂಧಿಯಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>