<p><strong>ನವದೆಹಲಿ: </strong>ಸಿಎಎ-ಎನ್ಆರ್ಸಿ ವಿರೋಧಿ ಪ್ರತಿಭಟನೆ ಸಂದರ್ಭ 'ಕಾಗಜ್ ನಹೀಂ ದಿಖಾಯೇಂಗೇ' (ದಾಖಲೆಪತ್ರ ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದವರಿಗೆ ಸೋಲಾಗಲಿದೆ ಎಂದು ಹೇಳಿರುವ ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿರಾಮ್ ಲಾಲ್, ಮತದಾನಕ್ಕೆ ಹೋಗುವಾಗ ಅಗತ್ಯ ದಾಖಲೆಗಳನ್ನು ಒಯ್ಯಿರಿ ಎಂದು ದೆಹಲಿ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<p>ನಿರ್ಮಾಣ್ ಭವನ್ ಬೂತ್ನಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗ ಮಾತನಾಡಿದ ಅವರು, "ಮತದಾರರಿಗೆ ನನ್ನ ಸಂದೇಶವೇ ಇದು. ಇವತ್ತು ನಿಮ್ಮ ದಾಖಲೆಪತ್ರವನ್ನು ಮರೆಯದೇ ಒಯ್ಯಿರಿ ಮತ್ತು ಅಗತ್ಯವಾಗಿ ತೋರಿಸಿ" ಎಂದರು.</p>.<p>ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಪ್ರತಿಭಟಿಸಿದ ಹಲವಾರು ಮಂದಿ "ಕಾಗಜ್ ನಹೀಂ ದಿಖಾಯೇಂಗೇ" (ಸರ್ಕಾರಕ್ಕೆ ನಮ್ಮ ದಾಖಲೆ ಪತ್ರಗಳನ್ನು ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದರು.</p>.<p>ಇಂದು ದಾಖಲೆ ಪತ್ರಗಳನ್ನು ತೋರಿಸದವರ ಮನಸ್ಥಿತಿಗೆ ಸೋಲಾಗುತ್ತದೆ ಮತ್ತು ಯಾರು ದಾಖಲೆಗಳನ್ನು ತೋರಿಸುತ್ತಾರೋ ಅವರಿಗೆ ಜಯವಾಗುತ್ತದೆ ಎಂದವರು ಹೇಳಿದರು.</p>.<p>ಬಿಜೆಪಿ ಹಿರಿಯ ಮುಖಂಡ ಶ್ಯಾಮ್ ಜಾಜು ಮಾತನಾಡಿ, ದೆಹಲಿಯ ಶಾಹೀನ್ಬಾಗ್ನಲ್ಲಿ ಸಿಎಎ-ವಿರೋಧೀ ಪ್ರತಿಭಟನೆಗಳಿಗೆ ಹಣಕಾಸು ನೆರವು ನೀಡಿದವರಿಗೆ ಮತ್ತು ಬೆಂಬಲಿಸಿದವರಿಗೆ ದೆಹಲಿಯ ಮತದಾರರು ಪಾಠ ಕಲಿಸುತ್ತಾರೆ ಎಂದರು.</p>.<p>ಆಮ್ ಆದ್ಮೀ ಪಾರ್ಟಿಯ ಅಮಾನತುಲ್ಲಾ ಖಾನ್ ಶಾಹೀನ್ ಬಾಗ್ ಪ್ರತಿಭಟನೆಗೆ ಹಣಕಾಸು ನೆರವು ನೀಡಿದ್ದು, ದೆಹಲಿಯ ಉಪಮುಖ್ಯಮಂತ್ರಿ ಅದನ್ನು ಬೆಂಬಲಿಸಿದ್ದರು ಎಂದು ಶ್ಯಾಮ್ ಜಾಜು ಹೇಳಿದರು.</p>.<p>ಚುನಾವಣಾ ಫಲಿತಾಂಶವು ಫೆ.11ರ ಸೋಮವಾರ ಪ್ರಕಟವಾಗಲಿದೆ. 70 ಸದಸ್ಯರುಳ್ಳ ದೆಹಲಿ ವಿಧಾನಸಭೆಗೆ ನಡೆದಹಿಂದಿನ ಚುನಾವಣೆಯಲ್ಲಿ ಆಮ್ ಆದ್ಮೀ ಪಕ್ಷಕ್ಕೆ 67 ಸ್ಥಾನಗಳು ಹಾಗೂ ಬಿಜೆಪಿಗೆ 3 ಸ್ಥಾನಗಳು ಲಭ್ಯವಾಗಿದ್ದರೆ, ಕಾಂಗ್ರೆಸ್ಗೆ ಯಾವುದೇ ಕ್ಷೇತ್ರವೂ ಸಿಕ್ಕಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಸಿಎಎ-ಎನ್ಆರ್ಸಿ ವಿರೋಧಿ ಪ್ರತಿಭಟನೆ ಸಂದರ್ಭ 'ಕಾಗಜ್ ನಹೀಂ ದಿಖಾಯೇಂಗೇ' (ದಾಖಲೆಪತ್ರ ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದವರಿಗೆ ಸೋಲಾಗಲಿದೆ ಎಂದು ಹೇಳಿರುವ ಬಿಜೆಪಿ ಮಾಜಿ ಸಂಘಟನಾ ಕಾರ್ಯದರ್ಶಿರಾಮ್ ಲಾಲ್, ಮತದಾನಕ್ಕೆ ಹೋಗುವಾಗ ಅಗತ್ಯ ದಾಖಲೆಗಳನ್ನು ಒಯ್ಯಿರಿ ಎಂದು ದೆಹಲಿ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<p>ನಿರ್ಮಾಣ್ ಭವನ್ ಬೂತ್ನಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗ ಮಾತನಾಡಿದ ಅವರು, "ಮತದಾರರಿಗೆ ನನ್ನ ಸಂದೇಶವೇ ಇದು. ಇವತ್ತು ನಿಮ್ಮ ದಾಖಲೆಪತ್ರವನ್ನು ಮರೆಯದೇ ಒಯ್ಯಿರಿ ಮತ್ತು ಅಗತ್ಯವಾಗಿ ತೋರಿಸಿ" ಎಂದರು.</p>.<p>ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಪ್ರತಿಭಟಿಸಿದ ಹಲವಾರು ಮಂದಿ "ಕಾಗಜ್ ನಹೀಂ ದಿಖಾಯೇಂಗೇ" (ಸರ್ಕಾರಕ್ಕೆ ನಮ್ಮ ದಾಖಲೆ ಪತ್ರಗಳನ್ನು ತೋರಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದರು.</p>.<p>ಇಂದು ದಾಖಲೆ ಪತ್ರಗಳನ್ನು ತೋರಿಸದವರ ಮನಸ್ಥಿತಿಗೆ ಸೋಲಾಗುತ್ತದೆ ಮತ್ತು ಯಾರು ದಾಖಲೆಗಳನ್ನು ತೋರಿಸುತ್ತಾರೋ ಅವರಿಗೆ ಜಯವಾಗುತ್ತದೆ ಎಂದವರು ಹೇಳಿದರು.</p>.<p>ಬಿಜೆಪಿ ಹಿರಿಯ ಮುಖಂಡ ಶ್ಯಾಮ್ ಜಾಜು ಮಾತನಾಡಿ, ದೆಹಲಿಯ ಶಾಹೀನ್ಬಾಗ್ನಲ್ಲಿ ಸಿಎಎ-ವಿರೋಧೀ ಪ್ರತಿಭಟನೆಗಳಿಗೆ ಹಣಕಾಸು ನೆರವು ನೀಡಿದವರಿಗೆ ಮತ್ತು ಬೆಂಬಲಿಸಿದವರಿಗೆ ದೆಹಲಿಯ ಮತದಾರರು ಪಾಠ ಕಲಿಸುತ್ತಾರೆ ಎಂದರು.</p>.<p>ಆಮ್ ಆದ್ಮೀ ಪಾರ್ಟಿಯ ಅಮಾನತುಲ್ಲಾ ಖಾನ್ ಶಾಹೀನ್ ಬಾಗ್ ಪ್ರತಿಭಟನೆಗೆ ಹಣಕಾಸು ನೆರವು ನೀಡಿದ್ದು, ದೆಹಲಿಯ ಉಪಮುಖ್ಯಮಂತ್ರಿ ಅದನ್ನು ಬೆಂಬಲಿಸಿದ್ದರು ಎಂದು ಶ್ಯಾಮ್ ಜಾಜು ಹೇಳಿದರು.</p>.<p>ಚುನಾವಣಾ ಫಲಿತಾಂಶವು ಫೆ.11ರ ಸೋಮವಾರ ಪ್ರಕಟವಾಗಲಿದೆ. 70 ಸದಸ್ಯರುಳ್ಳ ದೆಹಲಿ ವಿಧಾನಸಭೆಗೆ ನಡೆದಹಿಂದಿನ ಚುನಾವಣೆಯಲ್ಲಿ ಆಮ್ ಆದ್ಮೀ ಪಕ್ಷಕ್ಕೆ 67 ಸ್ಥಾನಗಳು ಹಾಗೂ ಬಿಜೆಪಿಗೆ 3 ಸ್ಥಾನಗಳು ಲಭ್ಯವಾಗಿದ್ದರೆ, ಕಾಂಗ್ರೆಸ್ಗೆ ಯಾವುದೇ ಕ್ಷೇತ್ರವೂ ಸಿಕ್ಕಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>