ಜಾರ್ಖಾಂಡ್(ಹಜಾರಿಬಾಗ್): ‘ಬಲವಾದ ಮತ್ತು ಸುಭದ್ರವಾದ ಸರ್ಕಾರಕ್ಕೆ ಕರ್ನಾಟಕದ ಜನ ಮತ್ತಷ್ಟು ಶಕ್ತಿ ತುಂಬಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಕಾಂಗ್ರೆಸ್ ಮತ್ತು ಜೆಡಿಎಸ್ ನಮಗೆ ಇನ್ನೂಮೋಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಕರ್ನಾಟಕದ ಜನ ಬಿಜೆಪಿಗೆ ಮತ ಹಾಕುವ ಮೂಲಕ ತೋರಿಸಿದ್ದಾರೆ. ಅಸ್ಥಿರ ಸರ್ಕಾರ ರಚಿಸುವುದಕ್ಕೆಯಾವುದೇ ಅವಕಾಶವಿಲ್ಲ,’ ಎಂದು ಹೇಳಿದರು.
#WATCH PM Modi #KarnatakaByelection: What the country thinks about political stability and for political stability how much the country trusts BJP, an example of that is in front of us today... BJP is leading on most seats. I express my gratitude towards people of Karnataka. pic.twitter.com/k1Ho75Xmse
‘ರಾಜಕೀಯ ಸ್ಥಿರತೆ ಬಗ್ಗೆ ದೇಶ ಏನು ಯೋಚಿಸುತ್ತಿದೆ ಮತ್ತು ಅಂತಹ ಸ್ಥಿರತೆಗಾಗಿ ಬಿಜೆಪಿಯನ್ನು ಈ ಮಟ್ಟಿಗೆ ದೇಶ ನಂಬಿದೆ ಎನ್ನುವುದು ಕರ್ನಾಟಕ ಉಪಚುನಾವಣೆ ಫಲಿತಾಂಶದಿಂದ ತಿಳಿಯುತ್ತಿದೆ.ಈ ಫಲಿತಾಂಶ ನೀಡಿದ್ದಕ್ಕೆ ಕರ್ನಾಟಕದ ಜನತೆಗೆನನ್ನ ಕೃತಜ್ಞತೆಗಳು, ’ ಎಂದರು.