ಬೆಂಗಳೂರು: ‘ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ ಕಾರಣಕ್ಕೆ ಕೇರಳದ ಮಲಪ್ಪುರಂನಲ್ಲಿ ಹಿಂದೂ ಕುಟುಂಬಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ,’ ಎಂದು ಆರೋಪಿಸಿ ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಕೋಮು ಭಾವನೆ ಪ್ರಚೋದಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Malappuram District police chief Abdul Kareem: Case registered against BJP MP Shobha Karandlaje under IPC sec 153(A), 120,& 34. She spread misleading and incorrect information & tried to destroy communal harmony. The water shortage was existing even before CAA was passed. https://t.co/pAaFQ8hRAw
— ANI (@ANI) January 24, 2020
ಶೋಭಾ ಕರಂದ್ಲಾಜೆ ಅವರ ಟ್ವೀಟ್ ಕುರಿತು ಮಲಪ್ಪುರಂನಿವಾಸಿ, ಸುಪ್ರೀಂ ಕೋರ್ಟ್ನ ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?
Kerala is taking baby steps to become another Kashmir!
— Shobha Karandlaje (@ShobhaBJP) January 22, 2020
Hindus of Kuttipuram Panchayat of Malappuram was denied water supply as they supported #CAA2019.#SevaBharati has been supplying water ever since.
Will Lutyens telecast this intolerance of PEACEFULS frm God's Own Country!? pic.twitter.com/y0HKI4bitD
ಬುಧವಾರ ಟ್ವೀಟ್ ಮಾಡಿದ್ದ ಶೋಭಾ ಕರಂದ್ಲಾಜೆ ಅವರು ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ‘ಕೇರಳ ಸರ್ಕಾರ ಮತ್ತೊಂದು ಕಾಶ್ಮೀರವಾಗುವುದರತ್ತ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಿದೆ. ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂ ಪಂಚಾಯಿತಿಯ ಹಿಂದೂ ಕುಟುಂಬಗಳು ಸಿಎಎ ಬೆಂಬಲಿಸಿದವು ಎಂಬ ಕಾರಣಕ್ಕೆ ಅವರಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ದೇವರ ಸ್ವಂತ ನಾಡಿನ ಶಾಂತಿಧೂತರ ಈ ಅಸಹಿಷ್ಣುತೆಯನ್ನು ಮಾಧ್ಯಮಗಳು ಪ್ರಸಾರ ಮಾಡಬಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದರು.
ಇದೇ ಟ್ವೀಟ್ಗೆ ಸಂಬಂಧಿಸಿದಂತೆ ಕೇರಳದಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಇತ್ತ ಕೇರಳದ ವಿರುದ್ಧ ಶುಕ್ರವಾರ ಮತ್ತೆರಡು ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ, ‘ಚೆರುಕುನ್ನು ಗ್ರಾಮದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳದ ಕೇರಳ ಸರ್ಕಾರ, ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ. ಪೂರ್ವಾಗ್ರಹ ಪೀಡಿತವಾದ ಎಡ ಸರ್ಕಾರದ ಒತ್ತಡ ತಂತ್ರದ ವಿರುದ್ಧ ಒಂದಾಗಲು ಇದು ಸಕಾಲ,’ ಎಂದು ಅವರು ಬರೆದುಕೊಂಡಿದ್ದಾರೆ.
Hail Kerala Govt!
— Shobha Karandlaje (@ShobhaBJP) January 24, 2020
Instead of acting against the discrimination happened to the dalit families of Cherukunnu, they lodged a case against me!
High time for entire society to unite against these pressurising tactics of non-performing, biased left govt.@TimesNow @BJP4Keralam
1/2 https://t.co/duiRMnfbg4
‘ಲೋಕಸಭೆಯ ಎರಡೂ ಸದನಗಳಲ್ಲಿ ಸಿಎಎ ಅಂಗೀಕಾರವಾಗಿದೆ. ಸಿಎಎಯನ್ನು ಬೆಂಬಲಿಸುತ್ತಿರುವವರಿಗೆ ವ್ಯವಹಾರ, ಕೆಲಸ, ಮೂಲಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ. ಕೇರಳದಲ್ಲಿರುವ ಎಡ ಸರ್ಕಾರ ಇದೆಲ್ಲದರ ಬಗ್ಗೆ ಜಾಣ ಕುರುಡಾಗಿದೆ. ಆದರೆ, ಇದರ ವಿರುದ್ಧ ಮಾತನಾಡಿದ ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅವರು ಆಕ್ರೋಶ ಗೊಂಡಿದ್ದಾರೆ.
#CAA2019 has been accepted by both the houses of parliament.
— Shobha Karandlaje (@ShobhaBJP) January 24, 2020
People who are supporting #CAA are being boycotted from business, denied of basic amenities & jobs.
CPM govt is blind to all these acts happening across Kerala, but files a case against me for speaking the truth!
2/2
ಇನ್ನು ಚೆರುಕುನ್ನು ಗ್ರಾಮದ ಸಮಸ್ಯೆ ಕುರಿತು ಮಾತನಾಡಿರುವ ಅಲ್ಲಿನ ಪೊಲೀಸರು, ‘ಗ್ರಾಮದಲ್ಲಿ ಒಂದು ವರ್ಷದಿಂದಲೂ ನೀರಿನ ಸಮಸ್ಯೆ ಇದೆ. ವ್ಯಕ್ತಿಯೊಬ್ಬ ತನ್ನ ಬೋರ್ವೆಲ್ನಿಂದ ಸ್ಥಳೀಯರಿಗೆ ನೀರು ಪೂರೈಸುತ್ತಿದ್ದ. ಆದರೆ, ಪಂಪ್ಸೆಟ್ಗೆ ವಿದ್ಯುತ್ ಅನ್ನು ಕೃಷಿ ಕಾರಣಕ್ಕೆ ನೀಡಲಾಗಿತ್ತು. ಈ ಕುರಿತು ವಿದ್ಯುತ್ ಮಂಡಳಿ ಆತನಿಗೆ ನೋಟಿಸ್ ನೀಡಿದೆ. ಕೃಷಿಯೇತರ ಕಾರಣಕ್ಕೆ ಪಂಪ್ ಸೆಟ್ ಬಳಸದಂತೆ ಆತನಿಗೆ ವಿದ್ಯುತ್ ತಾಕೀತು ಮಾಡಿದೆ. ಹೀಗಾಗಿ ಆತ ನೀರು ಪೂರೈಕೆ ನಿಲ್ಲಿಸಿದ್ದಾನೆ,’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.