ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಪ್ರದರ್ಶನ: ಊಟ ಬಿಟ್ಟ ಲಾಲು ಪ್ರಸಾದ್

Last Updated 26 ಮೇ 2019, 20:04 IST
ಅಕ್ಷರ ಗಾತ್ರ

ರಾಂಚಿ: ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ತಮ್ಮ ಪಕ್ಷದ ಹೀನಾಯ ಪ್ರದರ್ಶನದಿಂದ ನೊಂದಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಜೈಲಿನಲ್ಲಿ ಊಟ ತ್ಯಜಿಸಿದ್ದು, ಮೌನವಹಿಸಿದ್ದಾರೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಜನತಾದಳ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಒಂದೂ ಸ್ಥಾನ ಗೆದ್ದಿಲ್ಲ. 2014ರಲ್ಲಿ ಮೋದಿ ಅಲೆಯಲ್ಲಿಯೂ ಆರ್‌ಜೆಡಿ ನಾಲ್ಕು ಸ್ಥಾನ ಗೆದ್ದಿತ್ತು. ಮೇವು ಹಗರಣಕ್ಕೆ ಸಂಬಂಧಿಸಿ ಲಾಲು ಸದ್ಯ ಜೈಲಿನಲ್ಲಿ ಇದ್ದಾರೆ.

ಫಲಿತಾಂಶ ಹೊರಬಿದ್ದ ನಂತರ ಅವರ ದೈನಿಕ ಕಾರ್ಯಕ್ರಮ ಬದಲಾಗಿದೆ. ಉಪಾಹಾರ ಮತ್ತು ರಾತ್ರಿ ಊಟ ಸೇವಿಸುತ್ತಿದ್ದು, ಮಧ್ಯಾಹ್ನ ಊಟ ಮಾಡುತ್ತಿಲ್ಲ’ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ. ಉಮೇಶ್ ಪ್ರಸಾದ್ ತಿಳಿಸಿದರು.

‘ಒಂದು ಹೊತ್ತಿನ ಊಟ ಸೇವಿಸದ ಕಾರಣ ಮೊದಲಿನಂತೆ ಅವರಿಗೆ ನಿಗದಿತ ಔಷಧವನ್ನು ನೀಡಲು ಆಗುತ್ತಿಲ್ಲ. ಜೊತೆಗೆ ದಿನದ ಬಹುತೇಕ ಅವಧಿ ಅವರು ಮೌನವಾಗಿಯೇ ಇರುತ್ತಾರೆ’ ಎಂದು ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT