‘ಇದೆಲ್ಲದರ ಹಿಂದಿರುವ ಪಿತೂರಿಯನ್ನು ದೇಶ ತಿಳಿಯಲು ಬಯಸುತ್ತದೆ. ಪುಲ್ವಾಮ ದಾಳಿಯ ಸಂದರ್ಭದಲ್ಲಿ ಅಲ್ಲಿಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಅಧಿಕಾರಿ ಬೇರಾರೂ ಅಲ್ಲ ಅವರು ದೇವಿಂದರ್ ಸಿಂಗ್ ಅವರೇ ಆಗಿದ್ದರು. ಪುಲ್ವಾಮ ದಾಳಿಯಲ್ಲಿ ಬಳಕೆಯಾದ ಆರ್ಡಿಎಕ್ಸ್ ಎಲ್ಲಿಂದ ಬಂತು? ಒಂದು ವೇಳೆ ದೇವಿಂದರ್ ಸಿಂಗ್ ಬದಲಿಗೆ ದೇವಿಂದರ್ ಖಾನ್ ಆಗಿದ್ದರೆ, ಇಷ್ಟೊಂದಿಗೆ ಆರ್ಎಸ್ಎಸ್ ಪಡೆಗಳಿಂದ ಟ್ರೋಲ್ಗಳ ಸುರಿಮಳೆಯೇ ಆಗುತ್ತಿತ್ತು. ನಮ್ಮ ದೇಶದ ಶತ್ರುಗಳನ್ನು ಅವರ ಬಣ್ಣ, ಧರ್ಮ ಮತ್ತು ಸಿದ್ಧಾಂತದ ಆಧಾರದ ಹೊರತಾಗಿ ಖಂಡಿಸಬೇಕು’ ಎಂದು ಚೌಧರಿ ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.