ಶ್ರೀನಗರ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಲಾಗಿದ್ದಭಾರಿಭಯೋತ್ಪಾದಕ ಕೃತ್ಯವೊಂದನ್ನುಜಮ್ಮು ಮತ್ತು ಕಾಶ್ಮೀರ ಪೊಲೀಸರು ತಪ್ಪಿಸಿದ್ದಾರೆ.
ಮಸೂದ್ ಅಜರ್ ನೇತೃತ್ವದ ಜೈಷ್ ಎ ಮೊಹಮ್ಮದ್(ಜೆಇಎಂ)ಉಗ್ರ ಸಂಘಟನೆ ರೂಪಿಸಿದ್ದ ದಾಳಿ ಮಾದರಿಯನ್ನುಪೊಲೀಸರು ಧ್ವಂಸಗೊಳಿಸಿದ್ದು, ಐವರು ಉಗ್ರರನ್ನು ಬಂಧಿಸಿದ್ದಾರೆ.
‘ಬಂಧಿತ ಉಗ್ರರಿಂದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
DIG, Central Kashmir, VK Birdi on 5 terrorists of Jaish-e-Mohammad arrested by Srinagar Police: Given the kind of explosives which have been recovered, it seems they were planning a big attack. Investigation is being done to find out the further plan. pic.twitter.com/yHiWcGDYMP
‘ಇದೊಂದು ಪ್ರಮುಖ ಗೆಲುವುವಾಗಿದೆ. ಹಜರತ್ಬಲ್ನಲ್ಲಿ ಎರಡು ಗ್ರನೇಡ್ ದಾಳಿಯ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಗಣರಾಜ್ಯೋತ್ಸವದ ಮುನ್ನ ದಿನಗಳಲ್ಲಿ ಭಾರಿ ದುರಂತವೊಂದು ತಪ್ಪಿದಂತಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ಟೀಟ್ ಮಾಡಿದ್ದಾರೆ.
ಐಜಾಜ್ ಅಹಮ್ಮದ್ ಶೇಖ್, ಉಮರ್ ಹಮೀದ್ ಶೇಖ್, ಇಂತಿಯಾಜ್ ಅಹಮ್ಮದ್ ಚಿಕ್ಲಾ, ಸಾಹಿಲ್ ಫಾರೂಕ್, ನಸೀರ್ ಅಹಮ್ಮದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.