ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲುವಾಟ್ಸ್ಆ್ಯಪ್ ಮೂಲಕ ಸಿಸೋಡಿಯಾ ಕಳಿಸಿದ ಡಿಜಿಟಲ್ ಸಹಿಯನ್ನು ಬಳಸಲಾಗಿತ್ತು. ಚುನಾವಣಾ ಆಯೋಗ, ರಾಷ್ಟ್ರಪತಿ , ಸುಪ್ರೀಂಕೋರ್ಟ್ ಮತ್ತು ಗೃಹ ಸಚಿವಾಲಯದ ಘನತೆಯನ್ನುಈ ರೀತಿ ಕಳೆಯಬಾರದು ಎಂದು ನಾನು ಬಯಸುತ್ತಿದ್ದೇನೆ. ಕ್ಷಮಾದಾನ ಅರ್ಜಿ ತಿರಸ್ಕರಿಸುವಾಗ ದೆಹಲಿಯ ಗೃಹ ಸಚಿವರು ಅಧಿಕಾರದಲ್ಲಿರಲಿಲ್ಲ. ಹೀಗಿದ್ದರೂ ಅವರು ಅದನ್ನು ರಾಷ್ಟ್ರಪತಿಯರಿಗೆಕಳುಹಿಸಿಕೊಟ್ಟರು. ಕ್ಷಮಾದಾನ ಅರ್ಜಿ ತಿರಸ್ಕರಿಸಬಾರದಿತ್ತು. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಂಗ್ ಒತ್ತಾಯಿಸಿದ್ದಾರೆ.