ಅಪೂರ್ವ ಯರಬಹಳ್ಳಿ ಹಾಗೂ ಸ್ನಿಗ್ಧ ಜಯಕೃಷ್ಣನ್ ಅವರುಸಹ ಪ್ರಾಧ್ಯಾಪಕ ಶ್ರೀನಿವಾಸ ಮೇತುಕು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಸಂಬಂಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮೇನಕಾ ಗಾಂಧಿ, ರಾಷ್ಟ್ರೀಯ ಮಹಿಳಾ ಆಯೋಗ, ಕೆಲವು ಸಂಘಟನೆಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಇವರು ಪತ್ರ ಬರೆದಿದ್ದರು. ಅಲ್ಲದೇವಿಭಾಗದ ಮುಖ್ಯಸ್ಥರಾದ ಶಶಿಕಲಾ ಗುರುಪುರ್ ವಿರುದ್ಧ ನಂದಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.