ಉತ್ತರ ಪ್ರದೇಶದಲ್ಲಿ ರಾಹುಲ್ ಜತೆ ಪ್ರಿಯಾಂಕಾ ಗಾಂಧಿ ರೋಡ್ ಶೋ

ಲಖನೌ: 'ಮಿಷನ್ ಯುಪಿ' ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಪ್ರಿಯಾಂಕಾ ಗಾಂಧಿ ವಾದ್ರಾ ಲಖನೌದಲ್ಲಿ ಸೋಮವಾರ ರೋಡ್ ಶೋ ನಡೆಸಿದ್ದಾರೆ.
#WATCH Congress General Secretary for Uttar Pradesh East Priyanka Gandhi Vadra, General Secretary for Uttar Pradesh West Jyotiraditya Scindia and party President Rahul Gandhi, hold roadshow in Lucknow. pic.twitter.com/3yF6WGg9dV
— ANI UP (@ANINewsUP) February 11, 2019
ಏರ್ಪೋರ್ಟ್ ಕ್ರಾಸಿಂಗ್ ರಸ್ತೆಯಿಂದ ಪ್ರಿಯಾಂಕಾ ರೋಡ್ ಶೋ ಆರಂಭವಾಗಿದ್ದು, ರಾಹುಲ್ ಗಾಂಧಿ ಜತೆಗಿದ್ದಾರೆ. ಪ್ರಿಯಾಂಕಾ ಸಂಚರಿಸುತ್ತಿರುವ ಬಸ್ ಮುಂದೆ ಸಾಗುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಮತ್ತು ರಾಹುಲ್ ಕಡೆ ಪುಷ್ಪವರ್ಷ ಮಾಡಿದ್ದಾರೆ. ರೋಡ್ ಶೋನಲ್ಲಿ ಬಿಜೆಪಿ ಸರ್ಕಾರದ ರಫೇಲ್ ಹಗರಣದ ವಿರುದ್ಧ ಪ್ರತಿಭಟಿಸಿದ ರಾಹುಲ್, ರಟ್ಟಿನಿಂದ ಮಾಡಿದ ರಫೇಲ್ ಜೆಟ್ ವಿಮಾನದ ಮಾದರಿಯನ್ನು ತೋರಿಸಿದ್ದಾರೆ.
#Visuals from Congress' roadshow in Lucknow. General Secretary for Uttar Pradesh East Priyanka Gandhi Vadra, General Secretary for Uttar Pradesh West Jyotiraditya Scindia and party President Rahul Gandhi are crossing Transport Nagar pic.twitter.com/MbKZc4fNnF
— ANI UP (@ANINewsUP) February 11, 2019
ಪ್ರಿಯಾಂಕಾ ರೋಡ್ ಶೋನಿಂದಾಗಿ ವಿಮಾನ ನಿಲ್ದಾಣದ ಬಳಿ ಸಂಚಾರ ದಟ್ಟಣೆ ಕಂಡು ಬಂದಿದೆ.
ಲಾಲ್ಬಾಗ್ ಕ್ರಾಸಿಂಗ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೇಶ್ ಕೆ ಸಮ್ಮನ್ ಮೇ, ಪ್ರಿಯಾಂಕಾ ಜೀ ಮೈದಾನ್ ಮೇ ಎಂದು ಘೋಷಣೆ ಕೂಗಿ ಪ್ರಿಯಾಂಕಾ, ರಾಹುಲ್ಗೆ ಸ್ವಾಗತ ಕೋರಿದ್ದಾರೆ.
Congress General Secretary for Uttar Pradesh East Priyanka Gandhi Vadra, General Secretary for Uttar Pradesh West Jyotiraditya Scindia and party President Rahul Gandhi, continue their roadshow in Lucknow. pic.twitter.com/9T6xKTjapB
— ANI UP (@ANINewsUP) February 11, 2019
ಕಾಂಗ್ರೆಸ್ನ ಹಿರಿಯ ನಾಯರ ಅಮ್ಮರ್ ರಿಜ್ವಿ ಅವರು ಲಾಲ್ಬಾಗ್ ಕ್ರಾಸಿಂಗ್ನಲ್ಲಿ ಪ್ರಿಯಾಂಕಾ ಅವರಿಗೆ ಸ್ವಾಗತ ನೀಡಿದ್ದಾರೆ
ಲಾಲ್ಬಾಗ್ ಸುತ್ತಮುತ್ತಲೂ ಕಾಂಗ್ರೆಸ್ ಕಾರ್ಯಕರ್ತರು ಕಿಕ್ಕಿರಿದು ನಿಂತಿದ್ದು, ದಹನ್ ಕರೋ ಮೋದಿ ಕಿ ಲಂಕಾ, ಬೆಹನ್ ಪ್ರಿಯಾಂಕಾ, ಬೆಹನ್ ಪ್ರಿಯಾಂಕಾ (ಸಹೋದರಿ ಪ್ರಿಯಾಂಕಾ, ಮೋದಿಯವರ ಲಂಕೆಯನ್ನು ದಹನ ಮಾಡಿ )ಎಂದು ಘೋಷಣೆ ಕೂಗಿದ್ದಾರೆ.
ಕಾಂಗ್ರೆಸ್ ನಾಯಕ ನಸಿಮುದ್ದೀನ್ ಸಿದ್ದಿಖಿ ಕೂಡಾ ಲಾಲ್ ಬಾಗ್ ಕ್ರಾಸಿಂಗ್ನಲ್ಲಿ ಪ್ರಿಯಾಂಕಾ ಗಾಂಧಿಗೆ ಸ್ವಾಗತ ಕೋರಿದ್ದಾರೆ.
ಇದನ್ನೂ ಓದಿ: ದುರ್ಗಾವತಾರದಲ್ಲಿ ಪ್ರಿಯಾಂಕಾ ಪೋಸ್ಟರ್
ರಾಹುಲ್ ರಾಜಕೀಯ ಜೀವನ ಮುಗಿಯಿತು: ಅಕಾಲಿ ದಳ ನೇತಾರ
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಕ್ರಿಯ ರಾಜಕಾರಣಕ್ಕಿಳಿಸುವ ಮೂಲಕ ರಾಹುಲ್ ರಾಜಕೀಯ ಜೀವನ ಮುಗಿಯಿತು ಎಂದು ಶಿರೋಮಣಿ ಅಕಾಲಿ ದಳ ನೇತಾರ ಬಿಕ್ರಂ ಸಿಂಗ್ ಮಜಿತಿಯಾ ಹೇಳಿದ್ದಾರೆ.
ಚಂಡೀಗಢದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್, ಆಜ್ ಭೋಗ್ ಪಾಯಿ ಗಯಾ ಹೈ ರಾಹುಲ್ ಗಾಂಧಿ ಜಿ ದಾ (ಇಂದು ರಾಹುಲ್ ಗಾಂಧಿಯ ರಾಜಕೀಯಕ್ಕೆ ಚರಮಗೀತೆ ಹಾಡಲಾಗಿದೆ) ಎಂದಿದ್ದಾರೆ.
#WATCH Congress General Secretary for Uttar Pradesh East Priyanka Gandhi Vadra, General Secretary for Uttar Pradesh West Jyotiraditya Scindia and party President Rahul Gandhi, hold roadshow in Lucknow. pic.twitter.com/ipMSlxaJyD
— ANI UP (@ANINewsUP) February 11, 2019
ಆ ದೇಖೇ ಝರಾ, ಕಿಸ್ ಮೇ ಕಿತ್ ನಾ ಹೈ ಧಮ್
ಸಂಸದ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯದರ್ಶಿ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಫೋಟೋ ಟ್ವಿಟರ್ನಲ್ಲಿ ಶೇರ್ ಮಾಡಿ ಈ ರೀತಿ ಶೀರ್ಷಿಕೆ ನೀಡಿದ್ದಾರೆ.
आ देखे जरा किसमे कितना है दम,
जम के रखना कदम मेरे साथिया pic.twitter.com/6pTjBLrXJ9— Jyotiraditya Scindia (@JM_Scindia) February 11, 2019
ಇನ್ನೊಂದು ಟ್ವೀಟ್ನಲ್ಲಿ ಸಿಂಧ್ಯಾ ಅವರ ಜನ್ ಜನ್ ಕೀ ಯಹೀ ಪುಕಾರ್ ,ಅಬ್ ಅಲ್ವಿದಾ ಜುಮ್ಲಾ ಸರ್ಕಾರ್ ( ಜನರೆಲ್ಲರೂ ಹೇಳುತ್ತಿದ್ದಾರೆ, ಜುಮ್ಲಾ ಸರ್ಕಾರಕ್ಕೆ ವಿದಾಯ) ಎಂದಿದ್ದಾರೆ.
जन जन की यही पुकार,
अब अलविदा जुमला सरकार।#NayiUmeedNayaDesh pic.twitter.com/wRlzqRzLEQ— Jyotiraditya Scindia (@JM_Scindia) February 11, 2019
ವಿದ್ಯುತ್ ತಂತಿಯಿಂದ ರಕ್ಷಣೆ
ರೋಡ್ ಶೋನಲ್ಲಿ ಬಸ್ನ ಮೇಲೇರಿ ಕುಳಿತಿರುವ ರಾಹುಲ್, ಪ್ರಿಯಾಂಕಾ ಮತ್ತು ಜ್ಯೋತಿರಾಧಿತ್ಯ ಸಿಂಧ್ಯಾ ಅವರ ಪ್ರಾಣಕ್ಕೆ ಅಪಾಯವಾಗದಂತೆ ವಿದ್ಯುತ್ ತಂತಿಯನ್ನು ಸರಿಸುತ್ತಿರುವ ಅಂಗರಕ್ಷಕರು
#WATCH: Congress President Rahul Gandhi, Priyanka Gandhi and Jyotiraditya Scindia sit down to avoid overhanging electrical wires during their roadshow in Lucknow. pic.twitter.com/1lVmDMOyrV
— ANI UP (@ANINewsUP) February 11, 2019
ಇದನ್ನೂ ಓದಿ: ಚೌಕೀದಾರ್ ಚೋರ್ ಹೈ, ನಾವು ಮುಂದಿಟ್ಟ ಹೆಜ್ಜೆ ಹಿಂದಿಡಲಾರೆವು: ರಾಹುಲ್ ಗಾಂಧಿ
ಹಜರತ್ಗಂಜ್ ಜಿಪಿಒ ಪಾರ್ಕ್ ನಲ್ಲಿರುವ ಸರ್ದಾರ್ ಪಟೇಲ್ ಪ್ರತಿಮೆಗೆ ಹೂವಿನ ಹಾರ ಅರ್ಪಿಸಿದ ರಾಹುಲ್ ಮತ್ತು ಪ್ರಿಯಾಂಕಾ ಮಹಾತ್ಮಗಾಂಧಿ ಮತ್ತು ಬಿ.ಆರ್ ಅಂಬೇಡ್ಕರ್ ಪ್ರತಿಮೆಗಳಿ ಪುಷ್ಪ ನಮನ ಸಲ್ಲಿಸಿದ್ದಾರೆ.
अद्भुत, ऐतेहासिक, जनसमर्थन के लिए धन्यवाद लखनऊ।
संकेत साफ हैं - सरकार जाने को है, बदलाव आने को है।#NayiUmeedNayaDesh pic.twitter.com/PLVseCLwoD
— Jyotiraditya Scindia (@JM_Scindia) February 11, 2019
ಇದನ್ನೂ ಓದಿ: ಇಂದಿರಾ ಗಾಂಧಿ ಮರಳಿ ಬಂದಂತಾಗಿದೆ: ಕಾಂಗ್ರೆಸ್ ಕಾರ್ಯಕರ್ತರು
Lucknow: Congress General Secretary for Uttar Pradesh East Priyanka Gandhi Vadra & Congress President Rahul Gandhi pay floral tribute to Sardar Vallabhbhai Patel pic.twitter.com/limlEr4kMF
— ANI UP (@ANINewsUP) February 11, 2019
ಬಬುವಾ, ಬುವಾ ದಲಾಲ್ ಹೈ
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ದ ಕಾಂಗ್ರೆಸ್ ಕಚೇರಿ ಹೊರಗೆ ಬುಬುವಾ, ಬುವಾ ದಲಾಲ್ ಹೈ ಎಂಬ ಘೋಷಣೆ ಕೂಗಿದ್ದಾರೆ.
ಕಾಂಗ್ರೆಸ್ ರೋಡ್ ಶೋ ಮುಕ್ತಾಯ
ಬಸ್ನಿಂದ ಇಳಿದ ರಾಹುಲ್ ಮತ್ತು ಪ್ರಿಯಾಂಕಾ ಅಪ್ಪ ರಾಜೀವ್ ಗಾಂಧಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್ ಕಚೇರಿಗೆ ಪ್ರವೇಶಿಸಿದರು.
#Visuals: Congress General Secretary for Uttar Pradesh East Priyanka Gandhi Vadra interacts with a child during the roadshow in Lucknow. The girl says, "I gave her a garland & she gave me a chocolate. Later, she returned the garland to me & said, 'Stay happy'. pic.twitter.com/0h9PPYCiCm
— ANI UP (@ANINewsUP) February 11, 2019
ಯುಪಿಸಿಸಿ ಪ್ರಧಾನ ಕಚೇರಿಯಲ್ಲಿ ರಾಜ್ ಬಬ್ಬರ್ ಅವರು ರಾಹುಲ್, ಪ್ರಿಯಾಂಕಾ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಸ್ವಾಗತಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.