ಪನ್ವೇಲ್ ದಾರಿಯಾಗಿ ಸಾಗುವ ರೈಲು ವಾಶಿ ನಿಲ್ದಾಣಕ್ಕೆ ತಲುಪಿದಾಗ ಅನಾಮಿಕ ವ್ಯಕ್ತಿಯೊಬ್ಬರು ವಿದ್ಯುತ್ ರೈಲಿನ ಮೇಲಿರುವ ಕೇಬಲ್ಗೆ ಬ್ಯಾಗ್ ಬಿಸಾಡಿದ್ದಾರೆ. ವಿದ್ಯುತ್ ತಂತಿಗೆ ಬ್ಯಾಗ್ ತಗುಲಿ ಬೆಂಕಿ ಹತ್ತಿಕೊಂಡಿದ್ದು ತಕ್ಷಣವೇ ಬೆಂಕಿ ನಂದಿಸಲಾಗಿದೆ. ಈ ಘಟನೆಯಲ್ಲಿ ಪ್ರಾಣಾಪಾಯವೇನೂ ಸಂಭವಿಸಿಲ್ಲ. ಸುರಕ್ಷತೆಯ ನಿಟ್ಟಿನಲ್ಲಿ ಬೋಗಿಗಳನ್ನು ತೆಗೆಯಲಾಗಿದೆ ಎಂದು ಸೆಂಟ್ರಲ್ ರೈಲ್ವೆಯ ಹಿರಿಯ ಪಿಆರ್ಒ ಎಕೆ ಜೈನ್ ಹೇಳಿದ್ದಾರೆ.