ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನ್ಯಾಯವಲ್ಲ ಮೋದಿಜೀ, ನೆರೆ ಪರಿಹಾರಕ್ಕಾಗಿ ಟ್ವೀಟ್ ಕೂಗು

Last Updated 3 ಅಕ್ಟೋಬರ್ 2019, 16:05 IST
ಅಕ್ಷರ ಗಾತ್ರ

ಬೆಂಗಳೂರು: ಕಾಶ್ಮೀರದಲ್ಲಿನ ಸಮಸ್ಯೆ, ಕೋಲ್ಕತ್ತಾದ ಎನ್‌ಆರ್‌ಸಿ, ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮತ್ತು ಯುವ ಬ್ರಿಗೇಡ್‌ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ವಾರ್ ಒಂದೆಡೆಯಾದರೆ ಕರ್ನಾಟಕಕ್ಕೆ ನೆರೆ ಪರಿಹಾರ ಕೊಡಿ ಎಂಬ ಬೇಡಿಕೆಯನ್ನೊಡ್ಡಿರುವ ಟ್ವೀಟಿಗರು#NotFairModiji (ಇದು ನ್ಯಾಯವಲ್ಲ) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಸದ್ಯ #NotFairModiji ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ.

ಮೋದಿಯವರಿಗೆ ಮತ ಹಾಕುವುದಕ್ಕಾಗಿ ಈ ಯುವ ಚೌಕೀದಾರರು ಬೆಂಗಳೂರಿನಿಂದ ರಾತ್ರಿ ರೈಲು ಹತ್ತಿ ಉತ್ತರ ಕರ್ನಾಟಕಕ್ಕೆ ಬಂದಿದ್ದರು. ಈಗ ಅವರ ಕುಟುಂಬ ಎಲ್ಲವನ್ನೂ ಕಳೆದುಕೊಡಿದೆ. ಜನರು ಆತ್ಮಹತ್ಯೆ ಮಾಡುತ್ತಿದ್ದಾರೆ. ಹೀಗಿರುವಾಗಲೂ ನಾಯಕ ಚೌಕೀದಾರರಾದ ನೀವು ಅವರಿಗೆ ಸಹಾಯ ಮಾಡಲು ತಯಾರಿಲ್ಲ #NotFairModiji #WeWantFloodRelief (ನಮಗೆ ಪರಿಹಾರ ಬೇಕು) ಎಂದು ಲೋಕೇಶ್ ಎಂಬ ಟ್ವೀಟಿಗ ಟ್ವೀಟಿಸಿದ್ದಾರೆ.

ಅದೇ ವೇಳೆ ಕೇಂದ್ರಸಚಿವ ಸದಾನಂದ ಗೌಡ ಅವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿದ್ದನ್ನು ಪ್ರಶ್ನಿಸಿ ರಾಜೇಶ್ ಶೆಣೈ ಎಂಬ ಟ್ವೀಟಿಗ #NotFairModiji ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಸದಾನಂದ ಗೌಡರು ಸೂಲಿಬೆಲೆಯನ್ನು ದೇಶದ್ರೋಹಿ ಎಂದು ಹೇಳಿದ್ದನ್ನು ಖಂಡಿಸಿ ಹಲವಾರು ಟ್ವೀಟಿಗರು #StopUrArroganceDVS ಎಂಬ ಹ್ಯಾಶ್‌ಟ್ಯಾಗ್‌ನ್ನೂ ಟ್ರೆಂಡ್ ಮಾಡಿದ್ದಾರೆ.

ಇದರ ಜತೆಗೆ ಕೊಲ್ಕತ್ತಾದಲ್ಲಿ ನೆಲೆಸಿರುವ ಮುಸ್ಲಿಂ ವಲಸೆಗಾರರನ್ನು ಹೊರದಬ್ಬುವುದಾಗಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿರುವ ಟ್ವೀಟ್‌ಗೂ #NotFairModiji ಎಂಬ ಹ್ಯಾಶ್‌ಟ್ಯಾಗ್ ಬಳಕೆಯಾಗಿದೆ.

ಕಾಶ್ಮೀರ ಸಮಸ್ಯೆ

ಪಿಎಂಸಿ ಬ್ಯಾಂಕ್ ಬಗ್ಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT