ಫರೂಕಾಬಾದ್, ಉತ್ತರಪ್ರದೇಶ : ಇಲ್ಲಿನಆಕಾಶಗಂಗಾ ಆಸ್ಪತ್ರೆಯಶಸ್ತ್ರಚಿಕಿತ್ಸಾ ಘಟಕಕ್ಕೆ ನುಗ್ಗಿದ ಬೀದಿನಾಯಿಯೊಂದುನವಜಾತ ಶಿಶುವನ್ನು ಎಳೆದೊಯ್ದು ಕೊಂದು ಹಾಕಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷದಿಂದಲೇ ಘಟನೆ ನಡೆದಿದ್ದು, ಶಿಶುವಿನ ಪೋಷಕರು ದೂರು ನೀಡಿದ್ದಾರೆ. ವೈದ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.