ನವದೆಹಲಿ: ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈಗವಿದೇಶಗಳಲ್ಲಿಯೂ ತನಿಖೆ ಕೈಗೊಳ್ಳಬಹುದು.
ಎನ್ಐಎ ಕಾಯ್ದೆಗೆ ತಿದ್ದುಪಡಿ ತಂದ ನಂತರ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಭಯೋತ್ಪಾದನಾ ಕೃತ್ಯಗಳು, ಭಾರತದ ಹಿತಾಸಕ್ತಿಗೆ ಧಕ್ಕೆ ತರುವ ಸೈಬರ್ ಅಪರಾಧ ಹಾಗೂ ಮಾನವ ಕಳ್ಳಸಾಗಣೆಯಂಥ ಕೃತ್ಯ ವಿದೇಶದಲ್ಲಿ ಕಂಡು ಬಂದರೂ ಈಗ ಎನ್ಐಎ ತನಿಖೆ ನಡೆಸಬಹುದಾಗಿದೆ.