ದೆಹಲಿಯಲ್ಲಿ ಕಾಂಗ್ರೆಸ್ನ ಚುನಾವಣೆ ಉಸ್ತುವಾರಿಯಾಗಿರುವ ಕೀರ್ತಿ ಆಜಾದ್ ಅವರು ಶುಕ್ರವಾರ ಟ್ವೀಟ್ ಮಾಡಿ, ‘ಆಶಾ ದೇವಿ ಅವರಿಗೆ ಸ್ವಾಗತ,’ ಎಂದು ಬರೆದುಕೊಂಡಿದ್ದರು. ಇದನ್ನೇ ಆದಾರವಾಗಿಟ್ಟುಕೊಂಡ ಕೆಲ ಮಾಧ್ಯಮಗಳು, ನಿರ್ಭಯಾ ತಾಯಿ ಆಶಾದೇವಿ ಅವರು ಕಾಂಗ್ರೆಸ್ ಸೇರಿ, ನವದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವುದಾಗಿ ವರದಿ ಮಾಡಿದ್ದವು.