<p><strong>ಹೈದರಾಬಾದ್:</strong> ’ನೀವು ಪಾಕಿಸ್ತಾನದ ಬಗ್ಗೆ ಚಿಂತಿಸಿ, ನಮ್ಮ ಬಗ್ಗೆ ಚಿಂತಿಸಬೇಡಿ’ ಎಂದು ಪಾಕಿಸ್ತಾನದ<br />ಪ್ರಧಾನಿ ಇಮ್ರಾನ್ ಖಾನ್ಗೆಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.</p>.<p>ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆಸುಳ್ಳು ಪ್ರತಿಭಟನೆಯ ವಿಡಿಯೊವನ್ನು ಇಮ್ರಾನ್ ಖಾನ್ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.</p>.<p>ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ ಓವೈಸಿ, ‘ನಾವು ಭಾರತದ ಹೆಮ್ಮೆಯ ಮುಸ್ಲಿಮರು. ಯಾವುದೇ ಅಧಿಕಾರ, ನನ್ನಿಂದ ದೇಶಪ್ರೇಮ, ಧರ್ಮವನ್ನುಬೇರ್ಪಡಿಸಲು ಸಾಧ್ಯವಿಲ್ಲ. ನೀವು ಮೊದಲು ಪಾಕಿಸ್ತಾನದಲ್ಲಿರುವ ಸಿಖ್ಖ್ರನ್ನು ರಕ್ಷಿಸಿ, ಗುರುದ್ವಾರದ ಮೇಲೆದಾಳಿ ನಡೆಸಿದವರನ್ನು ಕಂಡುಹಿಡಿಯಿರಿ’ ಎಂದು ಗುಡುಗಿದರು.</p>.<p>ಪ್ರಧಾನಿ ಮೋದಿ ವಿರುದ್ಧ ಓವೈಸಿ ಗರಂ: ಉತ್ತರಪ್ರದೇಶದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ನಷ್ಟವನ್ನು ತುಂಬಿಕೊಡುವಂತೆನೋಟಿಸ್ ನೀಡಲಾಗಿದೆ.</p>.<p>ಹರಿಯಾಣದಲ್ಲಿ ಜಾಟ್ ಆಂದೋಲನದ ವೇಳೆ ₹2 ಸಾವಿರ ಕೋಟಿ ನಷ್ಟ ಉಂಟಾಗಿತ್ತು. ಈ ಪ್ರತಿಭಟನೆ ವೇಳೆ ಆದ ನಷ್ಟಕ್ಕೆ ಪ್ರತಿಭಟನಕಾರರಿಂದ ಎಷ್ಟುಹಣ ಸಂಗ್ರಹಿಸಿದ್ದೀರಾ?ಅವರು ಮುಸ್ಲಿಮರಲ್ಲ ಎಂಬ ಕಾರಣಕ್ಕೆ ನೀವು ಹಣ ಸಂಗ್ರಹಿಸಿಲ್ಲ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಅಲ್ಲವೇ? ಎಂದು ಮೋದಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.</p>.<p>ಬಾಂಗ್ಲಾದೇಶ, ಅಫ್ಗಾನಿಸ್ತಾನದ ಹಿಂದೂ, ಸಿಖ್ಖ್ರಿಗೆ ಪೌರತ್ವ ನೀಡುವುದಕ್ಕೆ ನಮ್ಮ ಅಕ್ಷೇಪ ಇಲ್ಲ. ಆದರೆ ನೀವು ಧರ್ಮದ ಹೆಸರಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಸಿಎಎ ಕೇವಲ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ರೂಪಿಸಿದ ಸಂಚು ಎಂದು ಅಸಾದುದ್ದೀನ್ ಹೇಳಿದರು. ಜನವರಿ10ರಂದು ಹೈದರಾಬಾದ್ನಲ್ಲಿ ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ವೇಳೆ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ’ನೀವು ಪಾಕಿಸ್ತಾನದ ಬಗ್ಗೆ ಚಿಂತಿಸಿ, ನಮ್ಮ ಬಗ್ಗೆ ಚಿಂತಿಸಬೇಡಿ’ ಎಂದು ಪಾಕಿಸ್ತಾನದ<br />ಪ್ರಧಾನಿ ಇಮ್ರಾನ್ ಖಾನ್ಗೆಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.</p>.<p>ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆಸುಳ್ಳು ಪ್ರತಿಭಟನೆಯ ವಿಡಿಯೊವನ್ನು ಇಮ್ರಾನ್ ಖಾನ್ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.</p>.<p>ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿದ ಓವೈಸಿ, ‘ನಾವು ಭಾರತದ ಹೆಮ್ಮೆಯ ಮುಸ್ಲಿಮರು. ಯಾವುದೇ ಅಧಿಕಾರ, ನನ್ನಿಂದ ದೇಶಪ್ರೇಮ, ಧರ್ಮವನ್ನುಬೇರ್ಪಡಿಸಲು ಸಾಧ್ಯವಿಲ್ಲ. ನೀವು ಮೊದಲು ಪಾಕಿಸ್ತಾನದಲ್ಲಿರುವ ಸಿಖ್ಖ್ರನ್ನು ರಕ್ಷಿಸಿ, ಗುರುದ್ವಾರದ ಮೇಲೆದಾಳಿ ನಡೆಸಿದವರನ್ನು ಕಂಡುಹಿಡಿಯಿರಿ’ ಎಂದು ಗುಡುಗಿದರು.</p>.<p>ಪ್ರಧಾನಿ ಮೋದಿ ವಿರುದ್ಧ ಓವೈಸಿ ಗರಂ: ಉತ್ತರಪ್ರದೇಶದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ನಷ್ಟವನ್ನು ತುಂಬಿಕೊಡುವಂತೆನೋಟಿಸ್ ನೀಡಲಾಗಿದೆ.</p>.<p>ಹರಿಯಾಣದಲ್ಲಿ ಜಾಟ್ ಆಂದೋಲನದ ವೇಳೆ ₹2 ಸಾವಿರ ಕೋಟಿ ನಷ್ಟ ಉಂಟಾಗಿತ್ತು. ಈ ಪ್ರತಿಭಟನೆ ವೇಳೆ ಆದ ನಷ್ಟಕ್ಕೆ ಪ್ರತಿಭಟನಕಾರರಿಂದ ಎಷ್ಟುಹಣ ಸಂಗ್ರಹಿಸಿದ್ದೀರಾ?ಅವರು ಮುಸ್ಲಿಮರಲ್ಲ ಎಂಬ ಕಾರಣಕ್ಕೆ ನೀವು ಹಣ ಸಂಗ್ರಹಿಸಿಲ್ಲ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಅಲ್ಲವೇ? ಎಂದು ಮೋದಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.</p>.<p>ಬಾಂಗ್ಲಾದೇಶ, ಅಫ್ಗಾನಿಸ್ತಾನದ ಹಿಂದೂ, ಸಿಖ್ಖ್ರಿಗೆ ಪೌರತ್ವ ನೀಡುವುದಕ್ಕೆ ನಮ್ಮ ಅಕ್ಷೇಪ ಇಲ್ಲ. ಆದರೆ ನೀವು ಧರ್ಮದ ಹೆಸರಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಸಿಎಎ ಕೇವಲ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ರೂಪಿಸಿದ ಸಂಚು ಎಂದು ಅಸಾದುದ್ದೀನ್ ಹೇಳಿದರು. ಜನವರಿ10ರಂದು ಹೈದರಾಬಾದ್ನಲ್ಲಿ ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ವೇಳೆ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>