ಕಾನ್ಪುರ (ಉತ್ತರಪ್ರದೇಶ): ಕೊರೊನಾ ಸೋಂಕು ತಡೆಗಾಗಿ ಜಾರಿಗೆ ತಂದಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುವುದು ಸಾಮಾನ್ಯ. ಆದರೆ,ಉತ್ತರಪ್ರದೇಶದ ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ಆರತಿ ಎತ್ತಿ ಹಣ್ಣು ನೀಡಿ ಬುದ್ದಿ ಹೇಳಿರುವ ಪ್ರಸಂಗದ ವಿಡಿಯೋ ಈಗ ವೈರಲ್ ಆಗಿದೆ.
ಕಾನ್ಪುರದ ಕಿದ್ವಾಯಿ ನಗರದಲ್ಲಿ ನಿಯಮ ಉಲ್ಲಂಘಿಸಿದ ಏಳೆಂಟು ಮಂದಿ ಯುವಕರನ್ನು ಹಿಡಿದು ತಂದ ಪೊಲೀಸರು ರಸ್ತೆಯಲ್ಲಿ ನಿಲ್ಲಿಸಿ ಅವರಿಗೆ ಕರ್ಪೂರ, ವೀಳ್ಯೆದೆಲೆ, ಅರಿಶಿನ ಕುಂಕುಮಗಳಿಂದ ಆರತಿ ಎತ್ತಿದ್ದಾರೆ.ಅಲ್ಲದೆ, ಕೈಗೆ ಒಂದೊಂದು ಬಾಳೆ ಹಣ್ಣುಗಳನ್ನೂ ಕೊಟಿದ್ದಾರೆ.
ನಂತರ ಬುದ್ದಿ ಹೇಳಿರುವ ಪೊಲೀಸರು ಮೊದಲ ಬಾರಿ ಉಲ್ಲಂಘಿಸಿದರೆ ಇದೆಲ್ಲಾ ಮಾಡುತ್ತೇವೆ. ಎರಡನೆ ಬಾರಿ ಉಲ್ಲಂಘಿಸಿದರೆ, ಎರತಿ ಎತ್ತುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ವಿಶಿಷ್ಟ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.