ಲಖನೌ: ಶ್ರಮಿಕ ವಿಶೇಷ ರೈಲಿನಲ್ಲಿನ ವಲಸೆ ಕಾರ್ಮಿಕರಿಗೆ ಬಿಸ್ಕತ್ ಎಸೆದಿದ್ದ ಹಿರಿಯ ರೈಲ್ವೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಉತ್ತರ ಪ್ರದೇಶದ ಫಿರೊಜಾಬಾದ್ ರೈಲು ನಿಲ್ದಾಣದಲ್ಲಿ ಇಲಾಖೆಯ ಕೆಲವು ನೌಕರರು ಬಿಸ್ಕತ್ ಎಸೆದಿದ್ದು, ಮುಖ್ಯ ಟಿಕೆಟ್ ತಪಾಸಣೆಕಾರ ಡಿ.ಕೆ. ದೀಕ್ಷಿತ್ ಈ ತಂಡದ ನೇತೃತ್ವ ವಹಿಸಿದ್ದರು.ಈ ಸಂದರ್ಭದಲ್ಲಿ ಕಾರ್ಮಿಕರನ್ನು ಸಹ ನಿಂದಿಸಲಾಗಿದೆ ಎಂದು ‘ಎನ್ಡಿಟಿವಿ’ ವರದಿ ಮಾಡಿದೆ.
ದೀಕ್ಷಿತ್ ಅವರ ಜನ್ಮದಿನದ ಕಾರಣಕ್ಕೆ ಬಿಸ್ಕತ್ ವಿತರಿಸಲಾಗಿದೆ ಎಂದು ನೌಕರರೊಬ್ಬರು ಹೇಳಿದ್ದಾರೆ. ಕೆಲವು ಕಾರ್ಮಿಕರು ಬಿಸ್ಕತ್ ಪಾಕೆಟ್ ಕೇಳಿದಾಗ ’ಈಗಷ್ಟೆ ನೀಡಿದ್ದೇವೆ. ನೀವೇ ಹಂಚಿಕೊಂಡು ತಿನ್ನಿ’ ಎಂದು ಹೇಳಿದ್ದಾರೆ.
ಮೂರು ನಿಮಿಷಗಳ ಈ ವಿಡಿಯೊವನ್ನು ಸ್ಥಳೀಯ ರೈಲ್ವೆ ಅಧಿಕಾರಿಯೊಬ್ಬರು ತಮ್ಮ ವಾಟ್ಸ್ಆ್ಯಪ್ನಲ್ಲಿ ಹಂಚಿಕೊಂಡಿದ್ದರು.