<p><strong>ನವದೆಹಲಿ:</strong> ಬಾಬರಿ ಮಸೀದಿ– ರಾಮಜನ್ಮಭೂಮಿ ನಿವೇಶನ ವಿವಾದ ಕುರಿತು ರಾಮ ಲಲ್ಲಾ ವಿರಾಜಮಾನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಪರಾಶರನ್ ಅವರ ನಿವಾಸವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿಯನ್ನಾಗಿ ಮಾಡಲಾಗಿದೆ.</p>.<p>ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಟ್ರಸ್ಟ್ ನೋಂದಣಿ ವಿಳಾಸವು ಆರ್–20, ಗ್ರೇಟರ್ ಕೈಲಾಶ್ ಪಾರ್ಟ್–1, ನವದೆಹಲಿ, 110048 ಎಂದು ತಿಳಿಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲರ ಸಂಘದ ವೆಬ್ಸೈಟ್ ಪ್ರಕಾರಪರಾಶರನ್ ಅವರ ನಿವಾಸದ ವಿಳಾಸ ಇದಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/up-govt-allots-five-acres-of-land-to-sunni-waqf-board-near-ayodhya-703176.html" target="_blank">ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಮಸೀದಿಗೆ ಭೂಮಿ ಕೊಟ್ಟ ಉತ್ತರ ಪ್ರದೇಶ ಸರ್ಕಾರ</a></p>.<p>ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಅವರು ಹಿಂದೂ ಪಕ್ಷಗಾರರಿಗೆ ಪ್ರಮುಖ ಸಲಹೆಗಾರರಾಗಿದ್ದರು. ರಾಮ ಲಲ್ಲಾ ವಿರಾಜಮಾನ್ ಪರ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ಇದರಿಂದಾಗಿಯೇ ವಿವಾದಿತ ಭೂಮಿಯನ್ನು ಸಂಪೂರ್ಣವಾಗಿ ರಾಮ ಮಂದಿರ ನಿರ್ಮಾಣಕ್ಕೆ ನೀಡಲಾಯಿತು.</p>.<p>92 ವರ್ಷ ವಯಸ್ಸಿನ ಪರಾಶರನ್ ಅವರು, ‘ಪ್ರಕರಣದ ವಿಚಾರಣೆಯನ್ನು ನಿಗದಿತ ಸಮಯದಲ್ಲಿ ನಡೆಸಿ ಸೂಕ್ತ ನ್ಯಾಯ ನೀಡಬೇಕು. ತಾವು ಸಾಯುವ ಮೊದಲು ಈ ಪ್ರಕರಣ ಇತ್ಯರ್ಥವಾಗಬೇಕು. ಇದು ತಮ್ಮ ಕೊನೆಯ ಆಸೆ’ ಎಂದು ಹೇಳಿದ್ದರು.</p>.<p><strong>‘ಆಯೋಗದ ಒಪ್ಪಿಗೆ ಅಗತ್ಯವಿಲ್ಲ’: </strong>ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಿ ಪ್ರಕಟಿಸಿರುವುದಕ್ಕೆ ಚುನಾವಣಾ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಆಯೋಗ ಬುಧವಾರ ಹೇಳಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/pm-narendra-modi-announces-setting-up-of-ram-temple-trust-703112.html" target="_blank">ರಾಮ ಜನ್ಮಭೂಮಿಗೆ ಟ್ರಸ್ಟ್ ರಚನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ</a></p>.<p>ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಟ್ರಸ್ಟ್ ಘೋಷಣೆಗೆ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಆಯೋಗದ ವಕ್ತಾರರು, ಇದರ ಅಗತ್ಯವಿಲ್ಲ ಎಂದುಸ್ಪಷ್ಟಪಡಿಸಿದ್ದಾರೆ.</p>.<p><strong>ದಲಿತರೊಬ್ಬರು ಸೇರಿ 15 ಮಂದಿ ಟ್ರಸ್ಟಿಗಳು: ಶಾ</strong></p>.<p>‘ರಾಮ ಮಂದಿರ ನಿರ್ಮಾಣಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಸೇರಿದಂತೆ 15 ಟ್ರಸ್ಟಿಗಳಿರಲಿದ್ದಾರೆ’ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.</p>.<p>ಟ್ರಸ್ಟ್ ರಚನೆ ಕುರಿತು ಪ್ರಧಾನಿ ಮೋದಿ ಪ್ರಕಟಿಸಿದ ನಂತರ ಶಾ ಈ ಹೇಳಿಕೆ ನೀಡಿದ್ದಾರೆ.</p>.<p>‘ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಅಭೂತಪೂರ್ವ ನಿರ್ಧಾರ ಪ್ರಕಟಿಸಿದ್ದಾರೆ’ ಎಂದು ಅವರನ್ನು ಶಾ ಅಭಿನಂದಿಸಿದ್ದಾರೆ.</p>.<p><strong>ಭೂಮಿ ನೀಡಿದ್ದರೆ ಮತ್ತೊಂದು ಮಂದಿರ ನಿರ್ಮಾಣ: ಶಿಯಾ</strong></p>.<p><strong>ಲಖನೌ: </strong>ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ ನೀಡಿರುವ ಐದು ಎಕರೆ ಭೂಮಿಯನ್ನು ತಮಗೆ ನೀಡಿದ್ದರೆ, ಅಯೋಧ್ಯೆಯಲ್ಲಿ ಮತ್ತೊಂದು ರಾಮ ಮಂದಿರವನ್ನು ನಿರ್ಮಿಸಿತ್ತಿದ್ದೆವು ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಬುಧವಾರ ಹೇಳಿದೆ.</p>.<p>‘ನಮಗೆ ಭೂಮಿ ದೊರೆತಿದ್ದರೆ, ಅಲ್ಲಿ ಮತ್ತೊಂದು ರಾಮ ಮಂದಿರ ನಿರ್ಮಿಸುತ್ತಿದ್ದೆವು’ ಎಂದು ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಹೇಳಿದ್ದಾರೆ.</p>.<p>‘ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಹಿಂದೂ ಸಮುದಾಯ ಪಡೆಯಲಿದೆ. ರಾಮ ಮಂದಿರದ ಬಳಿಯ ಮಸೀದಿ ನಿರ್ಮಿಸಿದ್ದು ಶಿಯಾ ಸಮುದಾಯದವರಾಗಿದ್ದರೂ, ಭೂಮಿ ಸುನ್ನಿ ಮಂಡಳಿಗೆ ಹೋಗಿದೆ. ಈ ಬಗ್ಗೆ ಎಂದಿಗೂ ಧ್ವನಿ ಎತ್ತದಿರುವ ಶಿಯಾ ಸಮುದಾಯದವರಿಂದ ದೊಡ್ಡ ತಪ್ಪಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಾಬರಿ ಮಸೀದಿ– ರಾಮಜನ್ಮಭೂಮಿ ನಿವೇಶನ ವಿವಾದ ಕುರಿತು ರಾಮ ಲಲ್ಲಾ ವಿರಾಜಮಾನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಪರಾಶರನ್ ಅವರ ನಿವಾಸವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಚೇರಿಯನ್ನಾಗಿ ಮಾಡಲಾಗಿದೆ.</p>.<p>ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಟ್ರಸ್ಟ್ ನೋಂದಣಿ ವಿಳಾಸವು ಆರ್–20, ಗ್ರೇಟರ್ ಕೈಲಾಶ್ ಪಾರ್ಟ್–1, ನವದೆಹಲಿ, 110048 ಎಂದು ತಿಳಿಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲರ ಸಂಘದ ವೆಬ್ಸೈಟ್ ಪ್ರಕಾರಪರಾಶರನ್ ಅವರ ನಿವಾಸದ ವಿಳಾಸ ಇದಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/up-govt-allots-five-acres-of-land-to-sunni-waqf-board-near-ayodhya-703176.html" target="_blank">ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಮಸೀದಿಗೆ ಭೂಮಿ ಕೊಟ್ಟ ಉತ್ತರ ಪ್ರದೇಶ ಸರ್ಕಾರ</a></p>.<p>ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಅವರು ಹಿಂದೂ ಪಕ್ಷಗಾರರಿಗೆ ಪ್ರಮುಖ ಸಲಹೆಗಾರರಾಗಿದ್ದರು. ರಾಮ ಲಲ್ಲಾ ವಿರಾಜಮಾನ್ ಪರ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ಇದರಿಂದಾಗಿಯೇ ವಿವಾದಿತ ಭೂಮಿಯನ್ನು ಸಂಪೂರ್ಣವಾಗಿ ರಾಮ ಮಂದಿರ ನಿರ್ಮಾಣಕ್ಕೆ ನೀಡಲಾಯಿತು.</p>.<p>92 ವರ್ಷ ವಯಸ್ಸಿನ ಪರಾಶರನ್ ಅವರು, ‘ಪ್ರಕರಣದ ವಿಚಾರಣೆಯನ್ನು ನಿಗದಿತ ಸಮಯದಲ್ಲಿ ನಡೆಸಿ ಸೂಕ್ತ ನ್ಯಾಯ ನೀಡಬೇಕು. ತಾವು ಸಾಯುವ ಮೊದಲು ಈ ಪ್ರಕರಣ ಇತ್ಯರ್ಥವಾಗಬೇಕು. ಇದು ತಮ್ಮ ಕೊನೆಯ ಆಸೆ’ ಎಂದು ಹೇಳಿದ್ದರು.</p>.<p><strong>‘ಆಯೋಗದ ಒಪ್ಪಿಗೆ ಅಗತ್ಯವಿಲ್ಲ’: </strong>ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಿ ಪ್ರಕಟಿಸಿರುವುದಕ್ಕೆ ಚುನಾವಣಾ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಆಯೋಗ ಬುಧವಾರ ಹೇಳಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/pm-narendra-modi-announces-setting-up-of-ram-temple-trust-703112.html" target="_blank">ರಾಮ ಜನ್ಮಭೂಮಿಗೆ ಟ್ರಸ್ಟ್ ರಚನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ</a></p>.<p>ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಟ್ರಸ್ಟ್ ಘೋಷಣೆಗೆ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಆಯೋಗದ ವಕ್ತಾರರು, ಇದರ ಅಗತ್ಯವಿಲ್ಲ ಎಂದುಸ್ಪಷ್ಟಪಡಿಸಿದ್ದಾರೆ.</p>.<p><strong>ದಲಿತರೊಬ್ಬರು ಸೇರಿ 15 ಮಂದಿ ಟ್ರಸ್ಟಿಗಳು: ಶಾ</strong></p>.<p>‘ರಾಮ ಮಂದಿರ ನಿರ್ಮಾಣಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಸೇರಿದಂತೆ 15 ಟ್ರಸ್ಟಿಗಳಿರಲಿದ್ದಾರೆ’ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.</p>.<p>ಟ್ರಸ್ಟ್ ರಚನೆ ಕುರಿತು ಪ್ರಧಾನಿ ಮೋದಿ ಪ್ರಕಟಿಸಿದ ನಂತರ ಶಾ ಈ ಹೇಳಿಕೆ ನೀಡಿದ್ದಾರೆ.</p>.<p>‘ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಅಭೂತಪೂರ್ವ ನಿರ್ಧಾರ ಪ್ರಕಟಿಸಿದ್ದಾರೆ’ ಎಂದು ಅವರನ್ನು ಶಾ ಅಭಿನಂದಿಸಿದ್ದಾರೆ.</p>.<p><strong>ಭೂಮಿ ನೀಡಿದ್ದರೆ ಮತ್ತೊಂದು ಮಂದಿರ ನಿರ್ಮಾಣ: ಶಿಯಾ</strong></p>.<p><strong>ಲಖನೌ: </strong>ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ ನೀಡಿರುವ ಐದು ಎಕರೆ ಭೂಮಿಯನ್ನು ತಮಗೆ ನೀಡಿದ್ದರೆ, ಅಯೋಧ್ಯೆಯಲ್ಲಿ ಮತ್ತೊಂದು ರಾಮ ಮಂದಿರವನ್ನು ನಿರ್ಮಿಸಿತ್ತಿದ್ದೆವು ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಬುಧವಾರ ಹೇಳಿದೆ.</p>.<p>‘ನಮಗೆ ಭೂಮಿ ದೊರೆತಿದ್ದರೆ, ಅಲ್ಲಿ ಮತ್ತೊಂದು ರಾಮ ಮಂದಿರ ನಿರ್ಮಿಸುತ್ತಿದ್ದೆವು’ ಎಂದು ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಹೇಳಿದ್ದಾರೆ.</p>.<p>‘ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಹಿಂದೂ ಸಮುದಾಯ ಪಡೆಯಲಿದೆ. ರಾಮ ಮಂದಿರದ ಬಳಿಯ ಮಸೀದಿ ನಿರ್ಮಿಸಿದ್ದು ಶಿಯಾ ಸಮುದಾಯದವರಾಗಿದ್ದರೂ, ಭೂಮಿ ಸುನ್ನಿ ಮಂಡಳಿಗೆ ಹೋಗಿದೆ. ಈ ಬಗ್ಗೆ ಎಂದಿಗೂ ಧ್ವನಿ ಎತ್ತದಿರುವ ಶಿಯಾ ಸಮುದಾಯದವರಿಂದ ದೊಡ್ಡ ತಪ್ಪಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>