ಸರ್ಕಾರಿ ಶಾಲೆಗಳು ಲಭ್ಯವಿಲ್ಲದ ಕಡೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಹೊಣೆಗಾರಿಕೆ ಖಾಸಗಿ, ಅನುದಾನರಹಿತ ಶಿಕ್ಷಣ ಸಂಸ್ಥೆಗಳದ್ದಾಗಿದೆ ಎಂದು ಸಾರಿದ್ದ ಈ ಕಾಯ್ದೆಯ ಮಹತ್ವವನ್ನೇ ಹೈಕೋರ್ಟ್ ನಿರ್ಲಕ್ಷಿಸಿದೆ ಎಂದು ಅವರು ದೂರಿದರು. ಬಿ.ಎನ್. ಯೋಗಾನಂದ ನೇತೃತ್ವದ ಆರ್ಟಿಇ ವಿದ್ಯಾರ್ಥಿಗಳು ಮತ್ತು ಪಾಲಕರ ಸಂಘ ಈ ಮೇಲ್ಮನವಿ ಸಲ್ಲಿಸಿದೆ.