ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿದ್ದ ಹಳೆಯ ಬಾಗಿಲನ್ನು ತೆರವುಗೊಳಿಸಿ, ತೇಗದ ಮರ ಬಳಸಿ ಹೊಸ ಬಾಗಿಲನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಈ ಬಾಗಿಲಿಗೆ ನಾಲ್ಕು ಕೆ.ಜಿ. ಚಿನ್ನ ಮತ್ತು ತಾಮ್ರದ ಲೇಪ ಹೊದಿಸಲಾಗಿದೆ.ಉನ್ನಿ ನಂಬೂದಿರಿ ನೇತೃತ್ವದಲ್ಲಿ ಶಬರಿಮಲೆಯ ಭಕ್ತರ ಗುಂಪೊಂದು ಈ ಬಾಗಿಲಿನ ವೆಚ್ಚ ಭರಿಸಿದೆ ಎಂದು ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ.