ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಶ್ಯಾಂ ದಿವಾನ್ ಮತ್ತು ಸಂಜಯ್ ಎಂ.ನುಲಿ ಅವರು ನ್ಯಾಯಮಂಡಳಿ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪರಿಸರ ಪರಿಣಾಮದ ಕುರಿತು ಹೊಸದಾಗಿ ಅನುಮತಿ ಪಡೆಯದ ಹೊರತು ಬಳ್ಳಾರಿ ರಸ್ತೆ ಹಾಗೂಹಳೆ ಮದ್ರಾಸ್ ರಸ್ತೆ ಮೂಲಕ ಸಾಗುವ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗಿನ ಮೊದಲ ಹಂತದ ವರ್ತುಲ ರಸ್ತೆಗೆ ‘ಅನಿರ್ದಿಷ್ಟಾವಧಿ ತಡೆ’ ನೀಡಲಾಗಿದೆ ಎಂದು ಹೇಳಿದರು.ಇದರಿಂದ ಯೋಜನೆಯ ವೆಚ್ಚ ₹1,000 ಕೋಟಿಯಿಂದ ₹12,000 ಕೋಟಿ ಏರಿಕೆಯಾಗಲಿದೆ ಎಂದು ಗಮನಕ್ಕೆ ತಂದರು.