‘ಸಂಸತ್ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ದೇಶಭಕ್ತಿ ಬಗ್ಗೆ ಭಾಷಣ ಮಾಡಿ ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಂಡರು. ಆದರೆ, ಮರುದಿನವೇ ‘‘ಕಪ್ಪು ಪುಟ‘‘ದ ದಾಖಲೆ ಹೊರಬಿತ್ತು. ಇದರಿಂದ, ದೇಶಭಕ್ತಿ ಘೋಷಣೆಗಳನ್ನು ಹಾಕುವವರು ಮತ್ತು ಸದನದಲ್ಲಿ ಮೇಜುಕುಟ್ಟಿದವರು ಮೌನವಹಿಸಿದರು’ ಎಂದು ಶಿವಸೇನಾದ ಮುಖವಾಣಿ ’ಸಾಮ್ನಾ’ ಸಂಪಾದಕೀಯದಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ.