ಸೀತಾಪುರ: ‘ಸೀತಾಪುರ ಜೈಲಿನಲ್ಲಿ ಭಯೋತ್ಪಾದಕ ಎಂಬಂತೆ ತಮ್ಮೊಂದಿಗೆ ವರ್ತಿಸಲಾಗಿದೆ’ ಎಂದು ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಶನಿವಾರ ಆರೋಪಿಸಿದ್ದಾರೆ.
ಸೀತಾಪುರ ಜೈಲಿನಿಂದ ರಾಂಪುರ ನ್ಯಾಯಾಲಯಕ್ಕೆ ಕರೆತಂದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜೈಲಿನಲ್ಲಿ ತಮ್ಮೊಂದಿಗೆ ಅಮಾನವೀಯವಾಗಿ ವರ್ತಿಸಲಾಗಿದೆ’ ಎಂದಿದ್ದಾರೆ.
ನಕಲಿ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಈಚೆಗೆ ಪೊಲೀಸರು ಬಂಧಿಸಿದ್ದರು.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಅವರ ಹೆಂಡತಿ ತನ್ಜೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಆಜಂ ಅವರನ್ನೂ ಬಿಗಿ ಭದ್ರತೆಯ ನಡುವೆ ರಾಂಪುರ ನ್ಯಾಯಾಲಯಕ್ಕೆ ಕರೆತರಲಾಗಿತ್ತು.