ಚೆನ್ನೈ: ನೀವು ನಿಮ್ಮ ಹೆಸರಿನ ಮುಂದೆ ಚೌಕೀದಾರ್ ಎಂದು ಯಾಕೆ ಸೇರಿಸಿಲ್ಲ ಎಂಬ ಪ್ರಶ್ನೆಯನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಲ್ಲಿ ಕೇಳಿದಾಗ 'ನಾನು ಚೌಕೀದಾರ್ಆಗಲಾರೆ. ಯಾಕೆಂದರೆ ನಾನು ಬ್ರಾಹ್ಮಣ, ಬ್ರಾಹ್ಮಣರು ಚೌಕೀದಾರ್ ಆಗಲಾರರು. ಇದು ಸತ್ಯ.ಚೌಕೀದಾರ್ ಏನು ಮಾಡಬೇಕು ಎಂಬ ಆದೇಶವನ್ನು ಮಾತ್ರ ನಾನು ನೀಡುತ್ತೇನೆ.ಚೌಕೀದಾರ್ ನಾವು ಹೇಳಿದಂತೆ ಕೇಳಬೇಕು ಎಂದೇ ಎಲ್ಲರು ಬಯಸುತ್ತಾರೆ. ಹಾಗಾಗಿ ನಾನು ಚೌಕೀದಾರ್ ಆಗಲ್ಲ' ಎಂದಿದ್ದಾರೆ.