ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಯ್ಯ ನಾಯ್ಡು ಭೇಟಿ ಮಾಡಿದ ಟಿಡಿಪಿ ಸಂಸದರು

Last Updated 21 ಜೂನ್ 2019, 19:53 IST
ಅಕ್ಷರ ಗಾತ್ರ

ನವದೆಹಲಿ: ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಜತೆ ವಿಲೀನವಾದ ಬೆನ್ನಲ್ಲೇ ಪಕ್ಷದ ಐವರು ಸಂಸದರು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಶುಕ್ರವಾರ ಭೇಟಿ ಮಾಡಿದರು.

ಸಂಸದರಾದ ವೈ.ಎಸ್. ಚೌಧರಿ, ಸಿ.ಎಂ. ರಮೇಶ್, ಗರಿಕಪಾಟಿ ಮೋಹನ್ ರಾವ್ ಹಾಗೂ ಟಿ.ಜಿ. ವೆಂಕಟೇಶ್ ಅವರನ್ನು ಬಿಜೆಪಿ ಸದಸ್ಯರು ಎಂಬುದಾಗಿರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದೆ.

ನಾಲ್ವರನ್ನು ಬಿಜೆಪಿ ಸದಸ್ಯರು ಎಂಬುದಾಗಿ ಗುರುತಿಸಿದ್ದರೂ, ಕಾನೂನು ಪ್ರಕಾರ ಹೆಚ್ಚು ದಿನ ಅದು ಉಳಿಯುವುದಿಲ್ಲ ಎಂದು ನಾಯ್ಡು ಅವರನ್ನು ಭೇಟಿ ಮಾಡಿದ ಟಿಡಿಪಿ ಸಂಸದರು ಹೇಳಿದರು.

ನಾಲ್ವರನ್ನೂ ಬಿಜೆಪಿ ಸದಸ್ಯರು ಎಂಬುದಾಗಿ ಗುರುತಿಸದಂತೆ ಟಿಡಿಪಿ ನಿಯೋಗ ಮನವಿಪತ್ರ ಸಲ್ಲಿಸಿತು.

ರಾಜ್ಯಸಭೆಯಲ್ಲಿ ಪಕ್ಷವನ್ನು ವಿಲೀನಗೊಳಿಸುವ ಅಧಿಕಾರ ಅವರಿಗೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT