ನವದೆಹಲಿ: ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಜತೆ ವಿಲೀನವಾದ ಬೆನ್ನಲ್ಲೇ ಪಕ್ಷದ ಐವರು ಸಂಸದರು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಶುಕ್ರವಾರ ಭೇಟಿ ಮಾಡಿದರು.
ಸಂಸದರಾದ ವೈ.ಎಸ್. ಚೌಧರಿ, ಸಿ.ಎಂ. ರಮೇಶ್, ಗರಿಕಪಾಟಿ ಮೋಹನ್ ರಾವ್ ಹಾಗೂ ಟಿ.ಜಿ. ವೆಂಕಟೇಶ್ ಅವರನ್ನು ಬಿಜೆಪಿ ಸದಸ್ಯರು ಎಂಬುದಾಗಿರಾಜ್ಯಸಭೆಯ ವೆಬ್ಸೈಟ್ನಲ್ಲಿ ನಮೂದಿಸಲಾಗಿದೆ.
ನಾಲ್ವರನ್ನು ಬಿಜೆಪಿ ಸದಸ್ಯರು ಎಂಬುದಾಗಿ ಗುರುತಿಸಿದ್ದರೂ, ಕಾನೂನು ಪ್ರಕಾರ ಹೆಚ್ಚು ದಿನ ಅದು ಉಳಿಯುವುದಿಲ್ಲ ಎಂದು ನಾಯ್ಡು ಅವರನ್ನು ಭೇಟಿ ಮಾಡಿದ ಟಿಡಿಪಿ ಸಂಸದರು ಹೇಳಿದರು.
ನಾಲ್ವರನ್ನೂ ಬಿಜೆಪಿ ಸದಸ್ಯರು ಎಂಬುದಾಗಿ ಗುರುತಿಸದಂತೆ ಟಿಡಿಪಿ ನಿಯೋಗ ಮನವಿಪತ್ರ ಸಲ್ಲಿಸಿತು.
ರಾಜ್ಯಸಭೆಯಲ್ಲಿ ಪಕ್ಷವನ್ನು ವಿಲೀನಗೊಳಿಸುವ ಅಧಿಕಾರ ಅವರಿಗೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿತು.