‘ತಿರುಮಲದಲ್ಲಿ ಬಹಳ ಹಿಂದಿನಿಂದಲೇ ಮದ್ಯ ನಿಷೇಧ ಜಾರಿಯಲ್ಲಿದೆ. ಸಮೀಪದಲ್ಲಿಯೇ ಇರುವ ತಿರುಪತಿಯನ್ನು ದೇಗುಲ ನಗರಿ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ, ತಿರುಪತಿಯಲ್ಲಿಯೂ ಮದ್ಯ ನಿಷೇಧ ಹೇರಬೇಕು. ಹಾಗೆಯೇ, ತಿರುಮಲದ ಪರಿಸರವನ್ನು ರಕ್ಷಿಸಬೇಕು. ಅದಕ್ಕಾಗಿ ಸಂಕ್ರಾಂತಿಯ ಹೊತ್ತಿಗೆ ಇಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿದೆ’ ಎಂದು ಮಂಡಳಿ ಹೇಳಿದೆ.