ಗ್ರಾಮದ ದೇವಸ್ಥಾನದ ಆವರಣದಲ್ಲಿ ರಾತ್ರಿ 9 ಗಂಟೆ ಸುಮಾರಿನಲ್ಲಿ ಮೂವರು ಲುಡೊ ಆಟವಾಡುತ್ತಿದ್ದರು. ಅಲ್ಲಿಗೆ ಪ್ರಶಾಂತ್ ಸಿಂಗ್ ಎಂಬ ಯುವಕ ಬಂದು ಆಟವನ್ನು ನೋಡುತ್ತ ನಿಂತಿದ್ದಾರೆ. ಇದೇ ವೇಳೆ ಅವರು ಕೆಮ್ಮಿದ್ದಾರೆ. ಕೊರೊನಾ ಸೋಂಕು ಹರಡುತ್ತಿರುವಾಗ, ಇಲ್ಲಿ ಕೆಮ್ಮಿದ್ದೇಕೆ ಎಂದು ಪ್ರಶಾಂತ್ ಸಿಂಗ್ನನ್ನು ಆ ಮೂವರು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.