ಲಖನೌ: ಉತ್ತರ ಪ್ರದೇಶದ ಮಾಜಿ ಶಾಸಕ,ಮಾಜಿ ರೌಡಿಶೀಟರ್ ಗುಡ್ಡು ಪಂಡಿತ್ ತಮ್ಮ ಹುಟ್ಟುಹಬ್ಬದ ಕೇಕ್ ಅನ್ನು ಕೊಡಲಿಯಿಂದ ಕತ್ತರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಸದಾ ಬಂದೂಕು ಮತ್ತು ಪಿಸ್ತೂಲುಗಳ ನಡುವೆಯೇ ಇರುವ ಗುಡ್ಡು ಪಂಡಿತ್, ಮಂಗಳವಾರ ನೊಯ್ಡಾ ಜಿಲ್ಲೆಯ ಗೌತಮ ಬುದ್ಧ ನಗರದ ಎಕ್ಸ್ಪ್ರೆಸ್ ವೇನಲ್ಲಿ ತಮ್ಮ ಬೆಂಬಲಿಗರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಈ ವೇಳೆ ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ಗುಡ್ಡು ತಮ್ಮಕಾರಿನ ಬಾನೆಟ್ ಮೇಲಿಟ್ಟಿರುವ ಕೇಕ್ ಅನ್ನು ಕೊಡಲಿಯಂದ ಕತ್ತರಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Former UP MLA Guddu Pandit cuts cake, placed on car bonnet, using a battle axe. Pandit (in olive Kurta) is seen surrounded by supporters flouting social distancing norms. Pandit has been booked several times for lockdown violation by Bulandshahar police. @Uppolicepic.twitter.com/DDH76wJwbo
ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಲಾಕ್ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘನೆಯ ಆರೋಪದ ಮೇರೆಗೆ ಗುಡ್ಡು ಪಂಡಿತ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
‘ಬುಲಂದ್ಶಹರ್ಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಭಿಮಾನಿಗಳು ನನ್ನನ್ನು ಕಾರಿನಿಂದ ಕೆಳಗಿಳಿಸಿ, ಇಂದು ನಿಮ್ಮ ಹುಟ್ಟು ಹಬ್ಬ ಎಂದರು. ನಂತರ ಸ್ನೇಹಿತರು ತಮ್ಮೊಂದಿಗೆ ತಂದಿದ್ದ ಕೇಕ್ ಅನ್ನು ಕತ್ತರಿಸುವಂತೆ ಹೇಳಿದರು’ ಎಂದು ಗುಡ್ಡು ಪಂಡಿತ್ ತಿಳಿಸಿದ್ದಾರೆ.
ಬುಲಂದ್ಶಹರ್ ಜಿಲ್ಲೆಯ ದಿಬೈ ವಿಧಾನಸಭಾ ಕ್ಷೇತ್ರದಿಂದ ಗುಡ್ಡುಪಂಡಿತ್ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ರೌಡಿಶೀಟರ್ ಆಗಿರುವ ಗುಡ್ಡು ವಿರುದ್ಧ ಅತ್ಯಾಚಾರ, ಕೊಲೆ ಯತ್ನ, ಲೂಟಿ, ಬೆದರಿಕೆ ಸೇರಿದಂತೆ ಎರಡು ಡಜನ್ಗಳಿಗೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.