ಕೋಲ್ಕತ್ತ:ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ರ್ಯಾಲಿ ಅಸಾಂವಿಧಾನಿಕ ಎಂದು ಅಲ್ಲಿನ ರಾಜ್ಯಪಾಲ ಜಗದೀಪ್ ಧನ್ಕರ್ ಸೋಮವಾರ ಹೇಳಿದ್ದಾರೆ.
‘ಕೇಂದ್ರ ಸರ್ಕಾರದ ಅಸಾಂವಿಧಾನಿಕ ಕಾಯ್ದೆಗಳ ವಿರುದ್ಧ ಕೊಲ್ಕತ್ತದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1 ಗಂಟೆಗೆ ಕೆಂಪು ರಸ್ತೆಯಲ್ಲಿನ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯಿಂದ ರ್ಯಾಲಿ ಶುರುವಾಗಲಿದೆ’ ಎಂದು ಮಮತಾ ಬ್ಯಾನರ್ಜಿ ಬೆಳಿಗ್ಗೆ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ರಾಜ್ಯಪಾಲರು, ಮಮತಾ ಅವರ ಈ ನಡೆ ತೀವ್ರ ಸಿಟ್ಟು ಬರಿಸಿದೆ. ಮುಖ್ಯಮಂತ್ರಿಗಳು ರ್ಯಾಲಿ ರದ್ದುಪಡಿಸಬೇಕು. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು ಪರಿಸ್ಥಿತಿ ಶಾಂತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
.@MamataOfficial. I am extremely anguished that CM and Ministers are to spearhead rally against CAA, law of the land. This is unconstitutional. I call upon CM to desist from this unconstitutional and inflammatory act at this juncture and devote to retrieve the grim situation.
— Jagdeep Dhankhar (@jdhankhar1) December 16, 2019
‘ನಮ್ಮ ಸರ್ಕಾರವು ಎನ್ಆರ್ಸಿ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ಅನುಷ್ಠಾನಗೊಳಿಸುವುದಿಲ್ಲ’ ಎಂದು ಮಮತಾ ಸರ್ಕಾರವು ಪ್ರಕಟಿಸುತ್ತಿರುವ ಎಲ್ಲ ಜಾಹೀರಾತುಗಳನ್ನು ವಾಪಸ್ ಪಡೆಯಬೇಕು ಎಂದೂ ರಾಜ್ಯಪಾಲರು ಒತ್ತಾಯಿಸಿದ್ದಾರೆ.
ಈ ನೆಲದ ಕಾನೂನನ್ನು ಪ್ರಶ್ನಿಸಿ ಜಾಹೀರಾತು ನೀಡಲು ಸರ್ಕಾರದ ಬೊಕ್ಕಸದ ಹಣ ಬಳಸುತ್ತಿರುವುದು ಎಷ್ಟು ಸರಿ ಎಂದೂಧನ್ಕರ್ ಪ್ರಶ್ನಿಸಿದ್ದಾರೆ.
‘ಎನ್ಆರ್ಸಿ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ಅನುಷ್ಠಾನಗೊಳಿಸುವುದಿಲ್ಲ ಎಂದು ನೀಡಿದ್ದ ಜಾಹೀರಾತುಗಳನ್ನು ಹಿಂಪಡೆಯುವಂತೆ ಈ ಹಿಂದೆ ನಾನು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದೆ. ಆದರೆ ಆ ಕುರಿತು ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಮತ್ತು ಪ್ರತಿಕ್ರಿಯೆ ನೀಡಿಲ್ಲ.ಈ ನೆಲದ ಕಾನೂನನ್ನು ಪ್ರಶ್ನಿಸಿ ಜಾಹೀರಾತು ನೀಡಲು ಸರ್ಕಾರದ ಬೊಕ್ಕಸದದಿಂದ ಹೆಚ್ಚು ಪ್ರಮಾಣದ ನಿಧಿ ಬಳಸುವುದು ಎಷ್ಟು ಸರಿ! ಇದು ಅಸಾಂವಿಧಾನಿಕ’ ಎಂದು ಮತ್ತೊಂದು ಟ್ವೀಟ್ನಲ್ಲಿ ಧನ್ಕರ್ ಉಲ್ಲೇಖಿಸಿದ್ದಾರೆ.
Earlier I had urged the Chief Minister to withdraw the advertisements forthwith indicating NO NRC and CAB. Unfortunately there has been no response or action. How can a Government spend from public exchequer huge funds to challenge the law of the land ! It is unconstitutional. pic.twitter.com/LGlgH3zax7
— Jagdeep Dhankhar (@jdhankhar1) December 15, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.