ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಮಾತ್ರ ಪ್ರವಾಹವೇ?: ಪತ್ರಕರ್ತರ ವಿರುದ್ಧ ಹರಿಹಾಯ್ದ ನಿತೀಶ್ ಕುಮಾರ್

‘ಅಮೆರಿಕ, ಮುಂಬೈನಲ್ಲೇನಾಯ್ತು’: ಸಿಎಂ ಪ್ರಶ್ನೆ
Last Updated 2 ಅಕ್ಟೋಬರ್ 2019, 9:07 IST
ಅಕ್ಷರ ಗಾತ್ರ

ಪಟ್ನಾ:ಭಾರೀ ಪ್ರವಾಹದಿಂದ ತತ್ತರಿಸಿದ ಬಿಹಾರದ ಕೆಲವು ಪ್ರದೇಶಗಳಿಗೆ ಮುಖ್ಯಮಂತ್ರಿನಿತೀಶ್ ಕುಮಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ಪಟ್ನಾದಲ್ಲಿ ಅವರುಸಂತ್ರಸ್ತರ ಆಕ್ರೋಶ ಎದುರಿಸಬೇಕಾಯಿತು.

ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಾದ ನಿತೀಶ್, ‘ದೇಶದ ಯಾವೆಲ್ಲ ಭಾಗಗಳಲ್ಲಿ, ಪ್ರಪಂಚದಾದ್ಯಂತ ಎಲ್ಲಿ ಪ್ರವಾಹ ಆಗಿಲ್ಲ ಹೇಳಿ? ಪಟ್ನಾದಲ್ಲಿ ಮಾತ್ರ ಪ್ರವಾಹವಾಗಿದೆಯೇ, ಇಲ್ಲಿ ಮಾತ್ರ ಸಮಸ್ಯೆ ಇರುವುದೇ? ಮುಂಬೈ, ಅಮೆರಿಕದಲ್ಲೇನಾಯ್ತು?’ ಎಂದು ಹರಿಹಾಯ್ದರು.

ಪ್ರವಾಹವನ್ನು ನೈಸರ್ಗಿ ವಿಪತ್ತು ಎಂದ ಅವರು, ಭಾರೀ ಮಳೆ ಮತ್ತು ಪ್ರವಾಹ ವಾಸ್ತವ. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಪ್ರವಾಹದ ನೀರನ್ನು ನಗರದಿಂದ ಹೊರಹೋಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಟ್ನಾದಲ್ಲಿ ಮಳೆ ನಿಂತು 36 ಗಂಟೆ ಕಳೆದರೂ ನಗರದ ಅನೇಕ ಪ್ರದೇಶಗಳು ಇನ್ನೂ ಮುಳುಗಡೆಯಾಗಿಯೇ ಇವೆ. ವಿದ್ಯುತ್‌, ಕುಡಿಯುವ ನೀರು ಇಲ್ಲದೆ ನಿವಾಸಿಗಳು ಪರದಾಡುವಂತಾಗಿದೆ.

ಮಳೆ ಸಂಬಂಧಿತ ಅವಘಡಗಳಿಂದಾಗಿ ಬಿಹಾರದಲ್ಲಿ ಈವರೆಗೆ 42 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ನಾದ ಹನುಮಾನ್ ನಗರ, ರಾಜೇಂದ್ರ ನಗರ ಮತ್ತು ಕಾನ್‌ಕರ್ ಬಾಘ್ ಪ್ರದೇಶಗಳ ನಿವಾಸಿಗಳಿಗೆ ವಾಯುಪಡೆ ಹೆಲಿಕಾಪ್ಟರ್‌ಗಳ ಮೂಲಕ ಪರಿಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಮನೆಗಳ ತಾರಸಿಯಲ್ಲಿ ನಿಂತು ಪ್ರವಾಹದಿಂದ ರಕ್ಷಣೆ ಪಡೆಯುತ್ತಿರುವ ನಿವಾಸಿಗಳು ಸಹಾಯಕ್ಕಾಗಿ ವಾಯುಪಡೆ ಹೆಲಿಕಾಪ್ಟರ್‌ಗಳತ್ತ ಮೊರೆಯಿಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT