‘ಮರಗಳ್ಳರ ಕಡಿವಾಣಕ್ಕೆಂದು ಜಾರಿಗೆ ತರಲಾಗಿದ್ದ ಸಾರ್ವಜನಿಕರ ಭದ್ರತಾ ಕಾಯ್ದೆಯನ್ನು ಅಮಾಯಕರ ಬಂಧನಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ನಾವು ಸರ್ಕಾರ ರಚಿಸಿದರೆ ಈ ಕಾಯ್ದೆಯನ್ನೂ ಕಿತ್ತೊಗೆಯುತ್ತೇವೆ. ದೇವರ ದಯೆಯಿಂದ 2019ರಲ್ಲೇ ಸರ್ಕಾರ ರಚನೆಯಾದರೆ, ಕೆಲವೇ ದಿನಗಳಲ್ಲಿ ಈ ಕಾಯ್ದೆಯನ್ನು ರದ್ದುಪಡಿಸುತ್ತೇವೆ ಎಂದು ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಾನು ಭರವಸೆ ನೀಡುತ್ತಿದ್ದೇನೆ’ ಎಂದು ಅವರು ಘೋಷಿಸಿದರು.