ಪುಣೆ ತಲುಪಿದ ಬಳಿಕ ಮಾತನಾಡಿರುವ ಅವರು,‘ನಾವು ಕೊಚ್ಚಿ ತಲುಪುವ ಮೊದಲೇ ಪ್ರತಿಭಟನಾಕಾರರು ವಿಮಾನ ನಿಲ್ದಾಣದ ಸುತ್ತಲೂ ಜಮಾಯಿಸಿದ್ದರು. ಅವರು ನಮ್ಮನ್ನು ನಿಂದಿಸಲು ಆರಂಭಿಸಿದರು. ವಾಪಸ್ ತೆರಳುವಂತೆ ಬೆದರಿಕೆ ಹಾಕಿದರು. ಏನು ಬೇಕಾದರೂ ಘಟಿಸಬಹುದು ಹಾಗಾಗಿ ವಾಪಸ್ ತೆರಳಿ ಎಂದು ಪೊಲೀಸರೂ ಮನವಿ ಮಾಡಿದರು. ನಮ್ಮಿಂದಾಗಿ ರಾಜ್ಯದಲ್ಲಿ ಜನರಿಗೆ ತೊಂದರೆಯಾಗುವುದು ಇಷ್ಟವಿಲ್ಲ. ಹಾಗಾಗಿ ವಾಪಸ್ ಆಗುವ ನಿರ್ಧಾರ ಮಾಡಿದೆವು. ಪೊಲೀಸರು ಮುಂದಿನ ಬಾರಿ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದ್ದಾರೆ. ಈ ಬಾರಿ ನಾವು ಬರುವುದಾಗಿ ತಿಳಿಸಿ ಬಂದಿದ್ದೆವು. ಆದರೆ ಮುಂದಿನ ಸಲ ನಾವು ಬರುವ ಬಗ್ಗೆ ಯಾರಿಗೂ ತಿಳಿಸುವುದಿಲ್ಲ. ಗೆರಿಲ್ಲಾ ತಂತ್ರವನ್ನು ಅನುಸರಿಸುತ್ತೇವೆ’ ಎಂದು ಹೇಳಿದರು.