‘ದಿವಾಕರ ರೆಡ್ಡಿ ವಿರುದ್ಧ ನಾನು ಈ ಪ್ರತಿಭಟನೆ ವ್ಯಕ್ತಪಡಿಸಿದ್ದೇನೆ. ಜನರ ರಕ್ಷಣೆಗಾಗಿ ಪೊಲೀಸರು ತಮ್ಮ ಜೀವವನ್ನೇ ತ್ಯಾಗ ಮಾಡುತ್ತಾರೆ. ಅಹೋರಾತ್ರಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ದೇಶವನ್ನು ರಕ್ಷಿಸುತ್ತಾರೆ. ಇವರನ್ನು ಅಗೌರವಿಸುವುದು ಖಂಡನೀಯ’ ಎಂದು ಮಾಧವ್ ಹೇಳಿದ್ದಾರೆ. ಸಂಸದರಾಗಿ ಆಯ್ಕೆಯಾಗುವ ಮುನ್ನ ಮಾಧವ್ ಕದ್ರಿ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು.