ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಈಚೆಗೆ ನಡೆದ ಉಗ್ರರ ದಾಳಿಗೆ ಸಿಆರ್ಪಿಎಫ್ನ 40 ಜವಾನರು ಹುತಾತ್ಮರಾದರು. ಈ ದುಃಖದ ವಿಷಯ ತಿಳಿದ ನಂತರವೂಪ್ರಧಾನಿ ನರೇಂದ್ರ ಮೋದಿ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
ಮೋದಿ ಅವರ ಆದ್ಯತೆ ಬಗ್ಗೆ ಟೀಕಿಸಿರುವ ಕಾಂಗ್ರೆಸ್, ‘ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗಿಂತ ಅಧಿಕಾರದ ಮದವೇ ಹೆಚ್ಚಾಗಿದೆ’ ಎಂದುಕುಟುಕಿದೆ.
पुलवामा आतंकी हमले के प्रति मोदी सरकार न तो कोई राजनैतिक जवाब दे रही है और न ही अपनी जिम्मेदारी का निर्वहन कर रही है।
— Randeep Singh Surjewala (@rssurjewala) February 21, 2019
पुलवामा हमले से देश सदमें में था, पर मोदीजी,कॉरबेट पार्क में डिस्कवरी चैनल के लिये अपनी फ़िल्में बनवा रहे थे,चाय नाश्ता कर रहे थे।#ModiFailsNationalSecurity pic.twitter.com/7MWmrm3OFK
ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೇವಾಲ ‘ಈಡೀ ದೇಶವೇ ಜವಾನರ ಸಾವಿನ ದುಃಖದಲ್ಲಿ ಮುಳುಗಿದ್ದರೆ, ಪ್ರಧಾನಿ ಮೋದಿ ಮಾತ್ರ ಉತ್ತರಾಖಂಡದಲ್ಲಿನ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದರು. ಆರಾಮವಾಗಿ ದೋಣಿ ವಿಹಾರವನ್ನೂ ನಡೆಸಿದರು’ ಎಂದು ಆರೋಪಿಸಿದರು.
जब पूरा देश 14 Feb को पुलवामा में 3:10 PM को हुए आतंकी हमले से सदमे में था तब मोदीजी घंटों तक डिस्कवरी चैनल के मुखिया व उनके कैमरा क्रू के साथ खुद के प्रचार प्रसार के लिए घड़ियालों को निहारने वाली बोट राईड कामजा ले रहे थे। #ModiFailsNationalSecurity pic.twitter.com/wuqZC2J0cu
— Randeep Singh Surjewala (@rssurjewala) February 21, 2019
‘ಅಂದು ಸಂಜೆ 6.30ರವರೆಗೂ ಚಿತ್ರೀಕರಣ ನಡೆಯಿತು. ನಂತರ 6.45ಕ್ಕೆ ಚಹಾ ಕೂಟದಲ್ಲಿಯೂ ಅವರು ಪಾಲ್ಗೊಂಡಿದ್ದರು. ದಾಳಿ ನಡೆದ ನಂತರ ಸುಮಾರುನಾಲ್ಕು ತಾಸುಮೋದಿ ಅವರು ಫೋಟೊಶೂಟ್, ಚಹಾಕೂಟ...ಹೀಗೆ ತಮ್ಮದೇ ಲೋಕದಲ್ಲಿ ಮಗ್ನರಾಗಿದ್ದರು’ ಎಂದು ಹೇಳಿದರು.
‘ಇದಕ್ಕಿಂತ ದುಃಖದ ವಿಷಯವೆಂದರೆ, ಜವಾನರ ಸಾವಿಗೆ ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಶೋಕಾಚರಣೆ ಎಂದು ಘೋಷಿಸಲೇ ಇಲ್ಲ. ಹಾಗೇನಾದರೂ ಶೋಕಾಚರಣೆ ಪ್ರಕಟಿಸಿದ್ದರೆ, ಮೋದಿ ನೇತೃತ್ವದಲ್ಲಿ ನಡೆಯುತ್ತಿದ್ದ ರಾಜಕೀಯ ರ್ಯಾಲಿ ಮತ್ತು ಉದ್ಘಾಟನಾ ಸಮಾರಂಭಗಳು ರದ್ದಾಗುತ್ತಿದ್ದವು. ಝಾನ್ಸಿಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಪಾಲ್ಗೊಂಡಿದ್ದ ಕಾರಣ ಘಟನಾ ಸ್ಥಳಕ್ಕೆ ಒಂದು ತಾಸು ತಡವಾಗಿ ಬಂದರು. ಸಾಕಷ್ಟು ವಿರೋಧ ಕೇಳಿಬಂದ ನಂತರವಷ್ಟೇ ಬಿಜೆಪಿ ತನ್ನ ಎಲ್ಲಾ ಸಭೆಗಳನ್ನು ರದ್ದುಗೊಳಿಸಿತು’ ಎಂದು ದೂರಿದರು.
‘ಉಗ್ರರಿಂದ ಪ್ರಾಣ ಕಳೆದುಕೊಂಡ ಸಿಆರ್ಪಿಎಫ್ ಜವಾನರು, ಯೋಧರ ಕುಟುಂಬದವರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಮೋದಿ ಅವರು ಉತ್ತರ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ’ ಎಂದು ಟೀಕಿಸಿದರು.
ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ, ಕಾಂಗ್ರೆಸ್ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದೆ.
* ಬಿಗಿ ಭದ್ರತೆ ಇರುವ ರಾಷ್ಟ್ರೀಯ ಹೆದ್ದರಿಯಲ್ಲಿಯೇ ಉಗ್ರರು350 ಕೆ.ಜಿ.ಯ ಸ್ಫೋಟಕ ಸಾಗಿಸಲು ಹೇಗೆ ಸಾಧ್ಯವಾಯಿತು?
* ಸಿಆರ್ಪಿಎಫ್ ಜವಾನರು ಯಾವ ದಾರಿಯಲ್ಲಿ ಬರುತ್ತಿದ್ದಾರೆ ಎನ್ನುವುದು ಉಗ್ರರಿಗೆ ಹೇಗೆ ತಿಳಿಯಿತು?
* ಸಿಆರ್ಪಿಎಫ್ ಜವಾನರಿಗೆ ವಾಯುಯಾನ ಸೌಲಭ್ಯವನ್ನು ಏಕೆ ಒದಗಿಸಿಲ್ಲ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.