ತಾಲ್ಲೂಕಿನ ಬನವಾಸಿ ಹೋಬಳಿ, ಅದಕ್ಕೆ ಹೊಂದಿಕೊಂಡಿರುವ ಸೊರಬ ತಾಲ್ಲೂಕು, ಸಾಗರ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಅನಾನಸ್ ಬೆಳೆಯುತ್ತಾರೆ. ಬೆಳೆ ಕೊಯ್ಲಿಗೆ ಬರುವ ಹೊತ್ತಿಗೆ, ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಲಾಕ್ಡೌನ್ ಘೋಷಿಸಿರುವ ಕಾರಣಕ್ಕೆ ಉತ್ತರ ಭಾರತಕ್ಕೆ ಹಣ್ಣು ಹೊತ್ತು ಹೋಗುವ ಲಾರಿಗಳ ಸಂಚಾರ ಸ್ಥಗಿತಗೊಂಡಿತು. ಹೀಗಾಗಿ, ಈಗ ಸುಮಾರು 200 ಹೆಕ್ಟೇರ್ನಲ್ಲಿ ಹಣ್ಣಾಗಿರುವ ಅನಾನಸ್ ಗದ್ದೆಯಲ್ಲೇ ಉಳಿದುಕೊಂಡಿದೆ.