ಕಳೆದ ವರ್ಷ ಭಾರಿ ಮಳೆಯಾದ ಕಾರಣ ಎಲ್ಲ ಜಲಾಶಯಗಳೂ ಭರ್ತಿಯಾಗಿದ್ದವು.ಲಾಕ್ಡೌನ್ ಪರಿಣಾಮ ದೇಶದಾದ್ಯಂತ ಕೈಗಾರಿಕೆಗಳು, ಮಾಲ್ಗಳು, ಚಲನಚಿತ್ರ ಮಂದಿರಗಳು ಸೇರಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಿವೆ. ಉಳಿದಂತೆ, ಕೃಷಿ ಮತ್ತು ಗೃಹ ಬಳಕೆಗೆ ಮಾತ್ರ ಈಗ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಇದರಿಂದ ನೀರು ಉಳಿತಾಯವಾಗಿ ಈ ವರ್ಷ ಬೇಸಿಗೆಯಲ್ಲಿ ಜಲವಿದ್ಯುತ್ ಯೋಜನೆಗೆ ನೀರಿನ ಕೊರತೆ ಎದುರಾಗದು ಎಂಬ ಲೆಕ್ಕಚಾರವೂ ಅಧಿಕಾರಿಗಳದ್ದಾಗಿದೆ.