ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ‘ನಾವು ಟಿಕೆಟ್ ಪಡೆದು ಸಿನಿಮಾ ನೋಡುತ್ತಿರುವ ಕಾರಣದಿಂದ ನೀವು ಜೀವನ ನಡೆಸುತ್ತಿದ್ದೀರಿ. ಗೌರವದಿಂದ ಇರುವುದನ್ನು ಬಿಟ್ಟು ರಾಜಕೀಯ ಮಾಡಿದರೆ ಸುಮ್ಮನಿರುವುದಿಲ್ಲ. ಪಕ್ಷದ ಮುಖಂಡರ ವಿರುದ್ಧ ಲಘುವಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದೆ. ನಿಮ್ಮ ಅಕ್ರಮಗಳ ಜಾತಕ ಹೊರತರಬೇಕಾಗುತ್ತದೆ. ನೀವು ಮಾಡಿರುವ ಆಸ್ತಿ ಬಗ್ಗೆ ತನಿಖೆ ಮಾಡಿಸಿದರೆ ಬೀದಿಗೆ ಬೀಳುತ್ತೀರಿ’ ಎಂದು ಗುಡುಗಿದರು.