‘ಇದೇ 27ರಿಂದ ಪರೀಕ್ಷೆ ನಿಗದಿ ಯಾಗಿದೆ. ಇನ್ನೂ ಐದಾರು ದಿನಗಳ ಕಾಲಾವಕಾಶ ಇದೆ. ಸೋಮವಾರ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಎಸ್.ಸುಧಾಕರ್ ಜೊತೆ ಚರ್ಚೆ ನಡೆಸಿ ಪರಿಸ್ಥಿತಿ ಅವಲೋಕಿಸ ಲಾಗುವುದು. ಪರೀಕ್ಷೆ ನಡೆಸುವುದಾದರೆ, ಕೈಗೊಳ್ಳಬೇಕಾದ ಕ್ರಮಗಳ
ಬಗ್ಗೆಯೂ ಚರ್ಚಿಸಲಾಗುವುದು. ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣ ಇಲಾಖೆಯು ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದರು.