ಬೆಂಗಳೂರು: ‘ನಾನು ಎಲ್ಲಿಗೂ ಓಡಿ ಹೋಗಿಲ್ಲ. ಇಲ್ಲೇ ಬೆಂಗಳೂರಿನಲ್ಲೇ ಇದ್ದೇನೆ.ಸಿನಿಮಾ ಶೂಟಿಂಗ್ನಲ್ಲಿದ್ದೇನೆ.ನಾನು ಇಂತಹದ್ದಕ್ಕೆಲ್ಲ ಹೆದರಿ ಓಡಿಹೋಗುವವಳಲ್ಲ. ಎಂತೆಂಥದ್ದೋ ದೊಡ್ಡ ಸಮಸ್ಯೆಗಳನ್ನು ಹ್ಯಾಂಡಲ್ ಮಾಡಿದ್ದೇನೆ’
–ಇದು ಸ್ಯಾಂಡಲ್ವುಡ್ನ ‘ತುಪ್ಪದ ಹುಡುಗಿ’ ಸ್ಟಾರ್ ನಟಿ ರಾಗಿಣಿ ದ್ವಿವೇದಿ ಅವರ ಖಡಕ್ ನುಡಿ.
ಖಾಸಗಿ ಹೋಟೆಲ್ವೊಂದರಲ್ಲಿ ಬಾಯ್ ಫ್ರೆಂಡ್ಸ್ ನಡುವೆ ಗಲಾಟೆ ನಡೆದ ನಂತರ ರಾಗಿಣಿ ದುಬೈಗೆ ಹಾರಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಡಿರುವುದರ ಬಗ್ಗೆ ಅವರು ಮಂಗಳವಾರ ಸ್ವಲ್ಪ ‘ಖಾರ’ವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾ ಚಿತ್ರೀಕರಣದಲ್ಲಿ ತೊಡಗಿರುವ ಅವರು ವಿರಾಮದ ನಡುವೆ ಪ್ರಜಾವಾಣಿಯೊಂದಿಗೆಮಾತನಾಡಿ, ‘ನನಗೆ ಸಂಬಂಧಿಸದ ಪ್ರಕರಣದಲ್ಲಿ ನನ್ನ ಹೆಸರು ಥಳುಕು ಹಾಕುವುದರಿಂದ ಯಾರಿಗೆ ಏನು ಖುಷಿ ಸಿಗುತ್ತಿದೆಯೋ ನನಗಂತೂ ಗೊತ್ತಿಲ್ಲ. ಇಂತಹದ್ದಕ್ಕೆಲ್ಲ ನನ್ನ ಹೆಸರು ಬಳಸುವವರನ್ನುನಾನಂತು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕಾನೂನು ಸಮರ ನಡೆಸುತ್ತೇನೆ’ ಎಂದು ಕಿಡಿಕಾರಿದ್ದಾರೆ.
‘ಹೊಡೆದಾಡಿಕೊಂಡಿರುವವರು ಇಬ್ಬರೂ ನನಗೆ ಪರಿಚಯಸ್ಥರೇ. ಆದರೆ, ಘಟನೆಗೂ ನನಗೂ ಸಂಬಂಧವಿಲ್ಲ. ಈ ಎಲ್ಲ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿದ್ದೇ ಸೋಮವಾರ. ನಾನು ದುಬೈಗೆ ಹೋಗಿಲ್ಲ. ಇಲ್ಲೆ ನೆಲಮಂಗಲ, ಬೆಂಗಳೂರಿನಲ್ಲಿ ಶೂಟಿಂಗ್ನಲ್ಲಿ ಇದ್ದೇನೆ.ಒಬ್ಬ ಮಹಿಳೆ ಬಗ್ಗೆ ಇಂಥ ಗಾಸಿಪ್ ಹಬ್ಬಿಸುವವರು ಯೋಚಿಸಬೇಕಲ್ಲವೇ. ಅವರಿಗೂ ಒಂದು ಕುಟುಂಬವಿರುವುದಿಲ್ಲವೇ. ನನಗೆ ಬಾಯ್ಫ್ರೆಂಡ್ ಇದ್ದರೆ ಇಡೀ ಪ್ರಪಂಚಕ್ಕೆ ತಿಳಿಸುತ್ತೇನೆ. ಅದರಲ್ಲಿ ಮುಚ್ಚಿಡುವಂತಹದ್ದು ಏನಿದೆ’ ಎಂದು ರಾಗಿಣಿ ಪ್ರಶ್ನಿಸಿದ್ದಾರೆ.
‘ಗಲಾಟೆಗೂ ನನಗೂ ಸಂಬಂಧವಿಲ್ಲವೆಂದ ಮೇಲೆ ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನನಗೆ ಮಾಡಲು ಸಾವಿರಾರು ಕೆಲಸಗಳಿವೆ. ಸದ್ಯ ಎರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ಪೂರ್ಣವಾಗುವ ಹಂತದಲ್ಲಿವೆ. ಇನ್ನೂ ಮೂರು ಚಿತ್ರಗಳ ತಯಾರಿ ನಡೆದಿದ್ದು, ಸದ್ಯದಲ್ಲೇ ಅವುಗಳನ್ನು ಪ್ರಕಟಿಸಲಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣವೇನು?
ಅಶೋಕ ನಗರದ ಹೋಟೆಲೊಂದರಲ್ಲಿ ನಟಿರಾಗಿಣಿದ್ವಿವೇದಿಅವರ ಸ್ನೇಹಿತರಿಬ್ಬರ ನಡುವೆ ಶುಕ್ರವಾರ ಮಾರಾಮಾರಿ ನಡೆದಿತ್ತು. ರಾಗಿಣಿ ಸ್ನೇಹಿತ ಬಿ.ಕೆ.ರವಿ ಶಂಕರ್ ಅಶೋಕ ನಗರ ಠಾಣೆಯಲ್ಲಿ ಶನಿವಾರ ಸಂಜೆ ‘ಶಿವಪ್ರಕಾಶ್ ಅಲಿಯಾಸ್ ಚಿಪ್ಪೆ ಎಂಬುವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ದೂರು ನೀಡಿದ್ದರು.
‘ಶುಕ್ರವಾರ ಮಧ್ಯಾಹ್ನ 11.45ಕ್ಕೆ ಸ್ನೇಹಿತೆರಾಗಿಣಿಹಾಗೂ ಇತರರೊಂದಿಗೆ ಹೋಟೆಲ್ಗೆ ಹೋಗಿದ್ದೆ. ಅಲ್ಲಿದ್ದ ಶಿವಪ್ರಕಾಶ್, ನನ್ನನ್ನು ಗುರಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಖಾಲಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದರು’ ಎಂದು ರವಿ ಶಂಕರ್ ದೂರಿನಲ್ಲಿ ಆರೋಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.