ಬೆಳಿಗ್ಗೆ ನಗರದ ಕಾವೂರು, ಬಂಟ್ಸ್ ಹಾಸ್ಟೆಲ್, ಲೇಡಿಹಿಲ್ ವೃತ್ತಗಳಲ್ಲಿ ಗುಂಪಾಗಿ ಸಂಚರಿಸುತ್ತಿದ್ದ ಜನರನ್ನು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಚದುರಿಸಿದರು. ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿತ್ತು. ಆದರೆ, ಅದರ ಮಾಹಿತಿ ಇಲ್ಲದೇ, ಜನರು ಪರದಾಡಿದರು. 8 ಗಂಟೆಯಾಗುತ್ತಲೇ, ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು.