ಘಾಟಿಯ 4ನೇ ತಿರುವಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಅಳುತ್ತಾ ಕತ್ತಲಲ್ಲಿ ಕಾಲ ಕಳೆಯುತ್ತಿದ್ದ ಮಗು, ಉಡುಪಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಕೀಲ ವಿನಯ್ ಅವರಿಗೆ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಮಗುವನ್ನು ಕರೆದುಕೊಂಡು ಬಂದು ಆಗುಂಬೆ ಚೆಕ್ ಪೋಸ್ಟ್ನ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಮಗುವನ್ನು ಆಗುಂಬೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಗುವನ್ನು ಹುಡುಕಿಕೊಂಡು ಬಂದ ಪೋಷಕರು, ಚೆಕ್ಪೋಸ್ಟ್ನ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ, ಪೊಲೀಸ್ ಠಾಣೆಗೆ ತೆರಳಿ ಮಗುವನ್ನು ಪಡೆದುಕೊಂಡರು ಎಂದು ಆಗುಂಬೆ ಠಾಣೆಯ ಪಿಎಸ್ಐ ದೇವರಾಯ ಘಟನೆ ಬಗ್ಗೆ ವಿವರ ನೀಡಿದರು.