ಬೆಂಗಳೂರು: ಅಂಬರೀಷ್ ಅವರ ಅಂತಿಮ ಯಾತ್ರೆ ಕಂಠೀರವ ಕ್ರೀಡಾಂಗಣದಿಂದ ಮೈಸೂರು ಬ್ಯಾಂಕ್ ವೃತ್ತದ ಮೂಲಕ ಮುಂದೆ ಸಾಗಿದೆ.
ಪಾರ್ಥಿವ ಶರೀರ ಇರುವ ವಾಹನದ ಹಿಂದೆ ಹಾಗೂ ಮುಂದೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಪೊಲೀಸ್ ಪಡೆಗಳ ವಾಹನದ ಹಿಂದೆ ಸಿನಿಮಾ ಕಲಾವಿದರು ಪ್ರತ್ಯೇಕ ವಾಹನದಲ್ಲಿ ಮೆರವಣಿಗೆಯಲ್ಲಿ ಹೊರಟಿದ್ದಾರೆ.
ಯಾತ್ರೆಯು ಹಟ್ಸನ್ ವೃತ್ತ, ಮೈಸೂರ್ ಬ್ಯಾಂಕ್ ಸರ್ಕಲ್, ಬಸವೇಶ್ವರ ವೃತ್ತ, ವಿಂಡ್ಸರ್ ಮ್ಯಾನರ್ ಮೇಲ್ಸೇತುವೆ, ಕಾವೇರಿ ಜಂಕ್ಷನ್, ಮಾರಮ್ಮನ ದೇವಸ್ಥಾನ ಯಶವಂತಪುರ ಗುರುಗುಂಟೆ ಪಾಳ್ಯ ಮೂಲಕ ಕಂಠೀರವ ಸ್ಟುಡಿಯೋ ತಲುಪಲಿದೆ.
ಮೆರವಣಿಗೆ ಉದ್ದಕ್ಕೂ ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ.