ವಿಜಯನಗರ ಕ್ಷೇತ್ರದ ಉಪ ಚುನಾವಣೆಗಾಗಿ, ತಾಲ್ಲೂಕಿನ ಹೊಸೂರಿನಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ‘ಮಗನ ಮದುವೆ ಮೊದಲೇ ನಿಶ್ಚಯವಾಗಿತ್ತು. ಚುನಾವಣೆಯಿಂದಾಗಿ, ಮದುವೆಯ ಯಾವ ಶಾಸ್ತ್ರಗಳಲ್ಲಿಯೂ ಸಂಪೂರ್ಣವಾಗಿ ಪಾಲ್ಗೊಳ್ಳಲು, ಸಂಭ್ರಮಿಸಲು ಆಗುತ್ತಿಲ್ಲ. ದೇವರ ಮೇಲೆ ಭಾರ ಹಾಕಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಕಣ್ಣೀರಾದರು.