ಆಗ ಎದ್ದು ನಿಂತ ಕುಮಾರಸ್ವಾಮಿ, ‘ರವಿ ಅವರು ನನ್ನನ್ನು ಉಲ್ಲೇಖಿಸಿಯೇ ಈ ಮಾತು ಹೇಳಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಒಂದು ಸಲ ಕಂಪನಿಯ ಮಾಲೀಕನನ್ನು ಕರೆದುಕೊಂಡು ಬಂದಿದ್ದರು. ಇಫ್ತಾರ್ ಕೂಟಕ್ಕೆ ಬರುವಂತೆ ಒತ್ತಾಯಿಸಿದ್ದರು. ಹೀಗಾಗಿ, ಆ ಕೂಟಕ್ಕೆ ಹೋಗಿದ್ದೆ. ಅಲ್ಲಿ ಬಿರಿಯಾನಿ ತಿಂದಿರಲಿಲ್ಲ. ಖರ್ಜೂರದ ಚೂರೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ. ಎರಡನೇ ಸಲ ಹೃದಯ ಶಸ್ತ್ರಚಿಕಿತ್ಸೆಯಾದ ಬಳಿಕ ಮಾಂಸ ತಿನ್ನುವುದನ್ನು ಬಿಟ್ಟಿದ್ದೇನೆ’ ಎಂದರು.