‘ಸಂವಿಧಾನದ ಅನುಚ್ಛೇದ 190 (3)(ಬಿ) ದಲ್ಲಿರುವ ಷರತ್ತಿಗನುಗುಣವಾಗಿ ಸಭಾಧ್ಯಕ್ಷರು ನಡೆದುಕೊಳ್ಳುವುದು ಅನಿವಾರ್ಯ. ಯಾವುದೇ ರಾಜೀನಾಮೆಯ ಸಂದರ್ಭದಲ್ಲಿ ಸಭಾಧ್ಯಕ್ಷರು, ತಮಗೆ ದೊರೆತ ಮಾಹಿತಿಯ ಮೇಲೆ ಮತ್ತು ಸೂಕ್ತವೆಂದು ತೋರುವಂಥ ವಿಚಾರಣೆಯನ್ನು ನಡೆಸಿದ ಬಳಿಕ, ಆ ರಾಜೀನಾಮೆಯನ್ನು ಸ್ವ ಇಚ್ಛೆಯಿಂದ ಕೊಟ್ಟಿಲ್ಲವೆಂದು ಅಥವಾ ಅದು ನೈಜವಾದುದಲ್ಲ ಎಂದು ಮನಗಂಡರೆ, ಅದನ್ನು ಅಂಗೀಕರಿಸುವಂತಿಲ್ಲ ಎಂದು ಸಂವಿಧಾನ ಹೇಳುತ್ತದೆ’ ಎಂದು ಅವರು ತಿಳಿಸಿದ್ದಾರೆ.