ಲಾಠಿ ತಿರುಗಿಸುವ ಬಗೆ, ಆತ್ಮರಕ್ಷಣೆಗೆ ತ್ರಿಶೂಲ ಬಳಸುವ ರೀತಿಯನ್ನು ಶಿಬಿರದಲ್ಲಿ ಕಲಿಸಲಾಗಿದೆ. ಶಿಬಿರದ ಕೊನೆಯ ದಿನ ಗಣಹೋಮ ನಡೆಸಿ ತ್ರಿಶೂಲಗಳಿಗೆ ಪೂಜೆ ಸಲ್ಲಿಸಲಾಯಿತು. ಕೇಸರಿ ಪಂಚೆ, ಶಾಲು ಧರಿಸಿದ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಪೂಜೆಯ ಬಳಿಕ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿದರು. ತ್ರಿಶೂಲ ಹಿಡಿದವರು ‘ಭಾರತ್ ಮಾತಾಕಿ ಜೈ’, ‘ಸನಾತನ ಧರ್ಮಕಿ ಜೈ’ ಎಂದು ಘೋಷಣೆ ಕೂಗಿದರು.