ಬಳ್ಳಾರಿ: ನಗರದ ಸತ್ಯನಾರಾಯಣಪೇಟೆಯ ಕೋವಿಡ್-19 ಸೋಂಕು ಪೀಡಿತ ವ್ಯಕ್ತಿ(61) ಮಂಗಳವಾರ ಬೆಳಿಗ್ಗೆ ಮೃತಪಟ್ಟರು.
ಬೆಂಗಳೂರಿನಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೇ 4ರಂದು ಬಳ್ಳಾರಿಗೆ ವಾಪಸಾಗಿದ್ದ ಅವರು ಉಸಿರಾಟದ ಸಮಸ್ಯೆಯಿಂದ ವಿಮ್ಸ್ಗೆ ದಾಖಲಾಗಿದ್ದರು.
ಮೇ 17 ರಂದು ಸೋಂಕಿರುವುದು ಪತ್ತೆಯಾಗಿತ್ತು. ಅಲ್ಲದೆ ಸೋಂಕಿತ ವ್ಯಕ್ತಿಮೃತಪಟ್ಟರು ಎಂದು ಸೋಮವಾರ ಸಂಜೆಯಿಂದಲೇ ಗಾಳಿ ಸುದ್ದಿ ಹಬ್ಬಿತ್ತು. ವಾಟ್ಸ್ಅಪ್ ಗ್ರೂಪ್ಗಳಲ್ಲೂ ಹರಿದಾಡಿತ್ತು.
ರಾತ್ರಿಯೂ ಅವರ ಆರೋಗ್ಯ ಸ್ಥಿರವಾಗಿತ್ತು. ಆದರೆ ಬೆಳಗಿನ ಜಾವ 5ರ ವೇಳೆಗೆ ಮೃತಪಟ್ಟರು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.