‘ವಿನಾಕಾರಣ ಕಾನೂನು ಬಾಹಿರವಾಗಿ ಡಿ.ಕೆ.ಶಿವಕುಮಾರ್ ಅವರನ್ನು ದಸ್ತಗಿರಿ ಮಾಡಲಾಗಿದೆ.ಸಾಕ್ಷಿ ಹಾಳು ಮಾಡ್ತಾರೆ, ವಿಚಾರಣೆಗೆ ಬರುವುದಿಲ್ಲ ಎನ್ನುವವರನ್ನು ಬಂಧಿಸಿದರೆ ಒಂದು ಲೆಕ್ಕ. ಆದರೆ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸಂಪೂರ್ಣ ಸಹಕರಿಸಿದ್ದಾರೆ. ಹೀಗಾಗಿಯೇ ಇದು ದುರುದ್ದೇಶದಿಂದ ಕೂಡಿದ, ರಾಜಕೀಯ ಪ್ರೇರಿತ ದಸ್ತಗಿರಿ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.